ಬಡವರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು: ಸಿದ್ದರಾಮಯ್ಯ

ಬಡವರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು: ಸಿದ್ದರಾಮಯ್ಯ

ಬೆಂಗಳೂರು, ಏ. 06: ಲಾಕ್ ಡೌನ್ ಹಿನ್ನಯಿಂದ ರಾಜ್ಯದಲ್ಲಿ  ಸಂಕಷ್ಟದಲ್ಲಿರುವ ರೈತರು, ಬಡವರು, ಕಟ್ಟಡ ಕಾರ್ಮಿಕರು, ದಿನಗೂಲಿ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಸಿದ್ದರಾಮಯ್ಯ, ಕೊರೋನಾ ಲಾಕ್ ಡೌನ್ನಿಂದ ರೈತರು ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾರದೆ ಪರದಾಡುತ್ತಿದ್ದಾರೆ. ಆದ್ದರಿಂದ ತಾವು ಕೇಂದ್ರ ಸರ್ಕಾರದೊಡನೆ ಮಾತನಾಡಿ ಹಣ್ಣು, ತರಕಾರಿ, ಹೂವುಗಳ ಮುಕ್ತ ಸಾಗಣೆಯು ರಾಜ್ಯ ರಾಜ್ಯಗಳ ನಡುವೆ ಸಾಧ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಕಟ್ಟಡ ಕಾರ್ಮಿಕರು, ಬಡವರು, ರೈತರು ದಿನಗೂಲಿ ಕಾರ್ಮಿಕರ ನರೆವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಧಾವಿಸಬೇಕು. ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಜೊತೆಗೆ ಲಾಕ್ ಡೌನ್ ಅವಧಿಯ ವೇತನ ಬಿಡುಗಡೆಗೆ ಸಂಬಂಧಿತ ಸಂಸ್ಥೆಗಳ ಮಾಲೀಕರ ಮನವೊಲಿಸಬೇಕು ಎಂದು ಆಗ್ರಹಿಸಿದ್ದಾರೆ.

 

Related