ಸಿದ್ದರಾಮಯ್ಯ ಅವರು ಒಬ್ಬ ಒಳ್ಳೆ ವ್ಯಕ್ತಿ: ತೇಜಸ್ವಿ ಸೂರ್ಯ

ಸಿದ್ದರಾಮಯ್ಯ ಅವರು ಒಬ್ಬ ಒಳ್ಳೆ ವ್ಯಕ್ತಿ: ತೇಜಸ್ವಿ ಸೂರ್ಯ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರ ಬಾರಿ ಜಿದ್ದಾಜಿದ್ದಿ ಕ್ಷೇತ್ರವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ನಿನ್ನೆ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಬ್ಬರದ ಪ್ರಚಾರವನ್ನು ನಡೆಸಿದ್ದರು.

ಬಿಜೆಪಿ ಅಭ್ಯರ್ಥಿಯಾಗಿರುವ ತ್ಯೇಜಿಸಿ ಸೂರ್ಯ ಅವರು ಇಂದು ಬೆಳಿಗ್ಗೆ ಅಬ್ಬರದ ಪ್ರಚಾರವನ್ನು ಕೈಗೊಂಡಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳ್ಳೆಯ ವ್ಯಕ್ತಿ. ಅವರ ರಾಜಕೀಯ ರಂಗದಲ್ಲಿ ಜೀವಿಸಿದಷ್ಟು ನಮಗೆ ವಯಸ್ಸು ಕೂಡ ಇಲ್ಲ ಹಾಗಾಗಿ ಸಿದ್ದರಾಮಯ್ಯ ಅವರು ನನ್ನ ಯಾವ ಹೆಸರಿನಿಂದ ಕರೆದರೂ ಕೂಡ ನನಗೆ ಬೇಜಾರಿಲ್ಲ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗಾಗಲೇ ನಮ್ಮ ತಾತನ ವಯಸ್ಸಾಗಿದ್ದು ಅವರು ಹಿರಿಯರು ಅವರು ಯಾವ ಹೆಸರಿನಿಂದ ಕರೆದರೂ ಅದೇ ನನಗೆ ಆಶೀರ್ವಾದವೆಂದು ತೇಜಸ್ವಿ ಸೂರ್ಯ ಅವರು ಹೇಳಿದ್ದಾರೆ.

ತನ್ನ ತಂದೆ ಅಧಿಕಾರಿಯಾಗಿ ಸಿದ್ದರಾಮಯ್ಯನವರ ಜೊತೆ ಕೆಲಸ ಮಾಡಿದ್ದಾರೆ ಮತ್ತು ಅವರೊಬ್ಬ ಒಳ್ಳೆಯ ಮುಖ್ಯಮಂತ್ರಿ ಮತ್ತು ವೈಯಕ್ತಿಕವಾಗಿ ಪ್ರಾಮಾಣಿಕರು ಅಂತ ಹೇಳಿರುತ್ತಾರೆ. ಸಿದ್ದರಾಮಯ್ಯನವರು ವಯಸ್ಸಿನಲ್ಲಿ ಬಹಳ ಹಿರಿಯರು, ತನ್ನ ತಾತನ ಪ್ರಾಯದವರು. ಹಾಗಾಗಿ ಅವರು ಯಾವ ಹೆಸರಿನಿಂದ ಕರೆದರೂ ಬೇಜಾರಿಲ್ಲ, ಅದನ್ನೆಲ್ಲ ಆಶೀರ್ವಾದ ಅಂತಲೇ ಭಾವಿಸುವೆ ಎಂದು ತೇಜಸ್ವೀ ಸೂರ್ಯ ಹೇಳಿದರು.

Related