ಮುಖ್ಯಮಂತ್ರಿಗೆ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಸನ್ಮಾನ

ಮುಖ್ಯಮಂತ್ರಿಗೆ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಸನ್ಮಾನ

ಮುದ್ದೇಬಿಹಾಳ : ವಿಶ್ವಕರ್ಮ ಸಮಾಜದ ಅಭಿವೃದ್ಧಿ ನಿಗಮಕ್ಕೆ ಬಾಬು ಪತ್ತಾರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ ಮುಖ್ಯಮಂತ್ರಿ ಅವರನ್ನು ಅವರ ಸ್ವಗೃಹದಲ್ಲಿ ವಿಶ್ವಬ್ರಾಹ್ಮಣ ಸಮಾಜದ ಗುರುಗಳಾದ ಅರೆಮಾದನಹಳ್ಳಿ ಸುಜ್ಞಾನಪೀಠದ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಅವರು ಸೇರಿದಂತೆ ಇತರೇ ಸ್ವಾಮಿಗಳು ಸನ್ಮಾನಿ ಗೌರವಿಸಿದರು.

ಈ ವೇಳೆ ಮಾತನಾಡಿದ ಶಿವಸುಜ್ಞಾನ ತೀರ್ಥ ಸ್ವಾಮೀಜಿ, ಹಲವು ವರ್ಷಗಳಿಂದ ವಿಶ್ವಕರ್ಮ ಸಮಾಜಕ್ಕೆ ಸರ್ಕಾರದ ಯಾವುದೇ ಸೌಲಭ್ಯಗಳು ಸಮರ್ಪಕವಾಗಿ ದೊರಕದೆ ಅಸಹಾಯಕರಾಗಿ ಆರ್ಥಿಕವಾಗಿ ಹಿಂದುಳಿದೆ. ಇದರಿಂದ ಪಂಚ ಕಸುಬುಗಳನ್ನು ನಂಬಿ ಜೀವನ ನಡೆಸುವ ವೃತ್ತಿದಾರರು ತೀವ್ರ ಸಂಕಷ್ಟದಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ ಎಂದರು.

ಈ ದಿಸೆಯಲ್ಲಿ ಪಂಚಕಸುಬುಗಳು ಶಾಶ್ವತ ಉಳಿಯಲು ಸಂಸ್ಕೃತಿ ಪರಂಪರೆ ಉಳಿಸಲು ವೃತ್ತಿ ಆಧಾರಿತ ನಂಬಿಕೆಯಿAದ ಜೀವನ ನಡೆಸುತ್ತಿರುವವರೆಗೆ ಆರ್ಥಿಕವಾಗಿ, ಶೈಕ್ಷಣಿವಾಗಿ, ರಾಜಕೀಯವಾಗಿ ಶಕ್ತಿತುಂಬಲು ಸಮಾಜದ ವಿವಿಧ ಬೇಡಿಕೆಗಳು ಹಾಗೂ ವಿಶ್ವಕರ್ಮ ಸಮಾಜಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಸಮಾಜದ ಮಠಮಾನ್ಯಗಳಿಗೆ ಪ್ರತ್ಯೇಕ ಅನುದಾನ ನೀಡಬೇಕೆಂದು ಕೋರಿ ಮನವಿ ಸಲ್ಲಿಸಿದರು.

 

Related