ಕುರುಬ ಸಮಾಜದಿಂದ ಸಿದ್ದುಗೆ ಎಚ್ಚರಿಕೆ!

ಕುರುಬ ಸಮಾಜದಿಂದ ಸಿದ್ದುಗೆ ಎಚ್ಚರಿಕೆ!

ಮೈಸೂರು : ಇಡೀ ಸಮುದಾಯಕ್ಕೆ ನೀವು ಅವಮಾನ ಮಾಡುತ್ತಿದ್ದೀರಿ. ಸಿದ್ದರಾಮಯ್ಯ ಆರೋಪ ಮಾಡಿದರು. ಸಮುದಾಯದ ಸ್ವಾಮೀಜಿಗಳು. ಅವರನ್ನು ಭಕ್ತಿ ಭಾವದಿಂದ ನೋಡುತ್ತಿದ್ದೇವೆ. ಮಠದ ಮೇಲೆ ಇಂತಹ ದೊಡ್ಡ ಆಪಾದನೆ ಸರಿಯಲ್ಲ” ಎಂದು ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದರು.

ಬುಧವಾರ ಮಾತನಾಡಿದ ವಿಶ್ವನಾಥ್ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಸ್ವಾಮೀಜಿಗಳ ಪಾದಯಾತ್ರೆಗೆ ಆರ್.ಎಸ್.ಎಸ್ ಫಂಡ್ ಬಗ್ಗೆ ಸಿದ್ದರಾಮಯ್ಯ ಮಾಡಿದ ಆರೋಪದ ಬಗ್ಗೆ ಮಾತನಾಡಿದ ವಿಶ್ವನಾಥ್, “ಸಮಾಜ ನಿಮ್ಮನ್ನು ಬಹಿಷ್ಕರಿಸಬೇಕಾಗುತ್ತದೆ. ಇಡೀ ಸಮುದಾಯಕ್ಕೆ ನೀವು ಅವಮಾನ ಮಾಡುತ್ತಿದ್ದೀರಿ” ಎಂದರು.

ಸಿದ್ದರಾಮಯ್ಯ ಮರೆತಿದ್ದಾರೆ  ಮಠದಿಂದ  ಧಾರ್ಮಿಕ  ಸಂಘಟನೆಯಿಂದಲೇ  ಅವರು ಸಿಎಂ ಆಗಿದ್ದು. ನಿಮಗೆ ಮಠನೂ ಗೊತ್ತಿಲ್ಲ ಸ್ವಾಮೀಜಿನೂ ಗೊತ್ತಿಲ್ಲ. ಮಠದ ಬಗ್ಗೆ ನಿಮಗೆ ಗೌರವ ಇಲ್ಲ. ಸಿದ್ದರಾಮಯ್ಯ ನಮ್ಮ ಸ್ವಾಮಿಗಳ ಮಾನ ಹರಾಜು ಹಾಕುತ್ತಿದ್ದಾರೆ” ಎಂದು ಆರೋಪಿಸಿದರು.

ಸ್ವಾಮೀಜಿಗಳ ಬಗ್ಗೆ ಮಾತನಾಡಬೇಡಿ. ಅವರಿಗೆ ಬಹುಪರಾಕ್ ಹೇಳುವವರು ಬೇಕು. ಸ್ವಾಮೀಜಿಗಳ ವಿರುದ್ಧದ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಸಮುದಾಯದ ಋಣ ನಿಮ್ಮ ಮೇಲಿದೆ. ಸಮಾಜದಿಂದಲೇ ನೀವು ಇಷ್ಟೆಲ್ಲ ಆಗಿದ್ದು. ಉತ್ತರ ಕರ್ನಾಟಕದ ಕುರುಬರ ಕಷ್ಟ ಸಿದ್ದರಾಮಯ್ಯ ಅರ್ಥವಾಗುತ್ತಿಲ್ಲ. ಬಿಳಿ ಬಟ್ಟೆ ಹಾಕೀರೋ ಸಿದ್ದರಾಮಯ್ಯಗೆ ಇದು ಅರ್ಥ ಆಗಲ್ಲ. ನಿಮಗೆ ಇಷ್ಟ ಇದ್ದರೆ ಹೋರಾಟಕ್ಕೆ ಬನ್ನಿ, ಜನರ ದಿಕ್ಕು ತಪ್ಪಿಸಬೇಡಿ ಎಂದು ವಿಶ್ವನಾಥ್ ಹೇಳಿದರು.

Related