ಪರಿಶಿಷ್ಟ ಜಾತಿ ಜನ ಓಡಾಡಲು ರಸ್ತೆ? ಅಧಿಕಾರಿಗಳ ಸಮಜಾಯಿಷಿ

ಪರಿಶಿಷ್ಟ ಜಾತಿ ಜನ ಓಡಾಡಲು ರಸ್ತೆ? ಅಧಿಕಾರಿಗಳ ಸಮಜಾಯಿಷಿ

ಮೇಲುಕೋಟೆ: ಪರಿಶಿಷ್ಟ ಜಾತಿ ಹೆಸರಲ್ಲಿ ಅಧಿಕಾರಿಗಳು ನಿಯಮ ಉಲ್ಲಂಘಿಸಿ ಎಸ್ ಸಿ ಪಿ ಹಣವನ್ನು ಪೋಲು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ದುದ್ದ ಹೋಬಳಿಯ ಬಿಳಿಗುಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ವರ್ಗದ ಅಭಿವೃದ್ಧಿಗೆ ಮೀಸಲಿಟ್ಟ ಹಣದಲ್ಲಿ ಸಾಮಾನ್ಯ ವರ್ಗಗಳ ಬೀದಿಗಳಿಗೆ ಅಧಿಕಾರಿಗಳು ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ಅಧಿಕಾರಿಯನ್ನು ಪ್ರಶ್ನಿಸಿದರೆ ಜಾಣ್ಮೆಯ ಉತ್ತರ ನೀಡಿ ಪರಿಶಿಷ್ಟ ಜಾತಿಯ ಜನಗಳು ಓಡಾಡಲಿ ಎಂದು ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡುತ್ತಿದ್ದೀವಿ ಎಂದು ಅಸಂಬದ್ಧ ಉತ್ತರ ನೀಡಿ ನುಣುಚಿಕೊಂಡರು.

Related