ಸತ್ಯವಾಯಿತೇ ಕೊಡಿಮಠದ ಶ್ರೀ ಭವಿಷ್ಯ?

ಸತ್ಯವಾಯಿತೇ ಕೊಡಿಮಠದ ಶ್ರೀ ಭವಿಷ್ಯ?

ಬೆಂಗಳೂರು,ಮಾ. 21 : ಕಳೆದ ವರ್ಷ ಅರಸಿಕೀಕೆರೆ ಕೋಡಿಹಳ್ಳಿ ಶ್ರೀಗಳು ವಿಶ್ವಕ್ಕೆ ಭಾರೀ ಗಂಡಾಂತರ ಎದುರಾಗಲಿದೆ ಎಂದು ಭವಿಷ್ಯ ನುಡಿದಿದ್ದರು. ಅದು ನಿಜವಾಯಿತು ಎಂಬ ಚರ್ಚೆ ಕೂಡ ಈಗ ನಡೆಯುತ್ತಿದೆ.
ಇಡೀ ವಿಶ್ವವನ್ನೇ ಒಂದೇ ಕಾಲಕ್ಕೆ ರೋಗವೊಂದು ಆವರಿಸಿ ಜನರನ್ನು ಆತಂಕಕ್ಕೆ ಈಡು ಮಾಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ, ಮನುಷ್ಯನ ಆಟಾಲೋಪಕ್ಕೆ ವಿಧಿ ಮತ್ತೊಂದು ಬಯಸಿದೆ.
ಭೂಮಂಡಲದಲ್ಲಿ ಸದ್ಯ ಭಕ್ತಿ ಬಾವಗಳು, ದೈವ ನಂಬಿಕೆ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರಕೃತಿ ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತದೆ. ಧರ್ಮದ ದಾರಿ ತಪ್ಪುವ ಮನುಷ್ಯನಿಗೆ ದೈವವು ಸೂಚನೆ ನೀಡುತ್ತದೆ. ಹಾಗೆಯೇ ಮುಂದಿನ ದಿನಗಳಲ್ಲಿ ವಿಶ್ವಕ್ಕೆ ಭಾರೀ ಗಂಡಾಂತರ ಎದುರಾಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದರು.
ಈ ಕುರಿತು ಮಾತನಾಡಿರುವ ಶ್ರೀ, ಮದ್ದಿಲ್ಲದ ಕಾಯಿಲೆಗೆ ಸಾವಿರ ಸಾವಿರ ಜನ ಸಾಯುತ್ತಾರೆ. ಈಗ ಬಂದಿರುವ ಕಾಯಿಲೆ ಕೇವಲ ಮನುಷ್ಯನಿಗೆ ಸೀಮಿತವಲ್ಲ. ಇದು ಮುಂದಿನ ದಿನಗಳಲ್ಲಿ ಜಡತ್ವದ ವಸ್ತುಗಳಿಗೂ ಆವರಿಸಬಹುದು ಎಂದಿದ್ದಾರೆ.
ಆದರೆ, ಈ ರೋಗಕ್ಕೆ ನಮ್ಮ ದೇಶದವರು ಭಯ ಪಡುವ ಅಗತ್ಯವಿಲ್ಲ. ಸರ್ವ ರೋಗಕ್ಕೂ ಈ ಭರತ ಪುಣ್ಯ ಭೂಮಿಯಲ್ಲಿ ಮದ್ದಿದೆ. ಎಲ್ಲಿ ನಾವು ಏನನ್ನು ಕಳೆದುಕೊಂಡಿದ್ದೇವೋ ಅಲ್ಲಿಯೇ ಅದನ್ನು ಪಡೆಯಬೇಕು ಎಂದು ಶ್ರೀ ಹೇಳಿದ್ದಾರೆ.

Related