ರಸ್ತೆ ಸುರಕ್ಷತಾ ಸಪ್ತಾಹಃ ಹೆಲ್ಮೆಟ್ ಜಾಥಾ

ರಸ್ತೆ ಸುರಕ್ಷತಾ ಸಪ್ತಾಹಃ ಹೆಲ್ಮೆಟ್ ಜಾಥಾ

ಯಾದಗಿರಿ : ಜಿಲ್ಲೆಯಲ್ಲಿ ಇತ್ತೀಚ್ಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಜಾಸ್ತಿಯಾಗುತ್ತಿದ್ದು, ಪ್ರಾಣಕ್ಕೆ ಹಾನಿಯಾಗದಿರಲು ಹೆಲ್ಮೆಟ್ ಧರಿಸದಿರುವುದು ಮುಖ್ಯ. ಪ್ರತಿಯೊಬ್ಬರು ನಿರ್ಲಕ್ಷ ವಹಿಸದೆ ಹೆಲ್ಮೆಟ್ ಧರಿಸಿ ಬೈಕ್ ನಡೆಸಬೇಕು ಎಂದು ನಗರ ಠಾಣೆ ಪಿಐ ಚನ್ನಯ್ಯ ಹಿರೇಮಠ ತಿಳಿಸಿದರು.

ನಗರದಲ್ಲಿ ಇಂದು ‘ರಸ್ತೆ ಸುರಕ್ಷತಾ ಸಪ್ತಾಹ’ ಅಂಗವಾಗಿ ಪೊಲೀಸರು ಹಮ್ಮಿಕೊಂಡ ಹೆಲ್ಮೆಟ್ ಧರಿಸಿ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

ದ್ವಿಚಕ್ರ ವಾಹನ ಸವಾರರು ತಮ್ಮ ಜೀವ ರಕ್ಷಣೆಗಾಗಿ ಹೆಲ್ಮೆಟ್ ಧರಿಸಿ ಬೈಕ್ ಓಡಿಸಬೇಕು. ಕಾನೂನು ಮೀರಿ ನಡೆದುಕೊಳ್ಳಬಾರದು. ಜೀವ ರಕ್ಷಣೆಗಾಗಿಯೇ ಹೆಲ್ಮೆಟ್ ಧರಿಸಲು ಕಾನೂನು ಅನುಷ್ಠಾನ ಮಾಡಿದ್ದು, ಪ್ರತಿಯೊಬ್ಬರು ಇದನ್ನು ಅರಿತು ನಡೆದುಕೊಳ್ಳಬೇಕು ಎಂದರು.

ಈ ವೇಳೆ ಪೊಲೀಸರು ಹೆಲ್ಮೆಟ್ ಧರಿಸಿ ನಗರದ ಠಾಣೆಯಿಂದ ಮೋಚಿ ಗಡ್ಡಾ, ಗಾಂಧಿಚೌಕ್, ದಿಗ್ಗಿಬೇಸ್, ಸಿಬಿ ಕಮಾನ್ ಮೂಲಕ ಬಸವೇಶ್ವರ ವೃತ್ತದಿಂದ ಆಸರ್ ಮೊಹಲ್ಲಾ ವಾಪಸ್ ನಗರ ಠಾಣೆ ಜಾಥಾ ತಲುಪಿತು.

ಈ ಸಂದರ್ಭದಲ್ಲಿ ಪಿಎಸ್ ಐ ಚಂದ್ರಕಾAತ ಮೆಕಾಲೆ, ಕಾನ್ಸಟೇಬಲ್ ಸಿಬ್ಬಂದಿ ಭಾಗವಹಿಸಿದ್ದರು.

Related