ನಿವೃತ್ತ ಶಿಕ್ಷಕರ ಸನ್ಮಾನ

ನಿವೃತ್ತ ಶಿಕ್ಷಕರ ಸನ್ಮಾನ

ಮುದ್ದೇಬಿಹಾಳ : ಡಾ.ಬಿ.ಆರ್.ಅಂಬೇಡ್ಕರ್ ಅವರು ಒಂದೇ ಸಮುದಾಯಕ್ಕೆ ಸಂವಿಧಾನ ಬರೆದಿಲ್ಲ. ಎಲ್ಲ ಜಾತಿ, ಮತ, ಪಂಗಡಗಳಿಗೆ ಅನ್ವಯವಾಗುವಂತೆ ಸಮಾನತೆಯ ಸಂವಿಧಾನ ರಚಿಸಿದ್ದರಿಂದಲೇ ಕೆಳಹಂತದಲ್ಲಿ ಜಾತಿಗಳಿಗೆ ನ್ಯಾಯ ದೊರಕುವುದಕ್ಕೆ ಸಾಧ್ಯವಾಗಿದೆ ಎಂದು ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ. ಚಲವಾದಿ ಹೇಳಿದರು.

ಪಟ್ಟಣದ ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಭಾನುವಾರ ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿ ತಾಲೂಕಾ ಘಟಕದಿಂದ ಹಮ್ಮಿಕೊಂಡಿದ್ದ ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಹಕ್ಕಿಗಾಗಿ ನಾವು ಹೋರಾಡುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಸಂವಿಧಾನ ಬದ್ಧವಾಗಿ ದೊರೆತಿರುವ ಮೀಸಲಾತಿಯ ಸೌಲಭ್ಯವನ್ನು ಮತ್ತೊಬ್ಬರು ಕಬಳಿಸುವ ಮೂಲಕ ಅನ್ಯಾಯವಾಗುತ್ತಿರುವ ವಿರುದ್ಧ ಧ್ವನಿ ಎತ್ತಬೇಕಾಗಿದೆ ಎಂದರು.

ನ್ಯಾಯವಾದಿ ಕೆ.ಬಿ. ದೊಡಮನಿ ಮಾತನಾಡಿ, ಭಾರತ ದೇಶಕ್ಕಾಗಿ ವೈರಿ ಆಗಿದ್ದಾರೋ ಅವರೆಲ್ಲ ನನ್ನನ್ನು ಓದಿಕೊಂಡಿದ್ದಾರೆ. ನನ್ನ ಜನ ನನ್ನನ್ನು ಅರ್ಥ ಮಾಡಿಕೊಂಡಿಲ್ಲ. ಹಿಂದುಳಿದ ಜನಾಂಗ ಆಳುವ ವರ್ಗವಾಗಬೇಕು ಎಂಬ ಆಶಯವನ್ನು ಡಾ. ಅಂಬೇಡ್ಕರ್ ಅವರು ಹೊಂದಿದ್ದರು ಎಂದು ಹೇಳಿದರು.

Related