ಕೋವಿಡ್-19 ಬಗ್ಗೆ ಜಾಗೃತಿ ವಹಿಸಲು ಮನವಿ

ಕೋವಿಡ್-19 ಬಗ್ಗೆ ಜಾಗೃತಿ ವಹಿಸಲು ಮನವಿ

ಗಂಗಾವತಿ : ಕೊರೋನಾದಿಂದ ದಿನನಿತ್ಯ ಸಾವು ನೋವುಗಳು ಸಂಭವಿಸುತ್ತಿದ್ದು, ಜಿಲ್ಲೆಯಲ್ಲಿ ಐದು ಸಾವಿರ ಗಡಿಯನ್ನು ದಾಟಿದೆ. ಹಾಗಾಗಿ ಜನರು ಸರ್ಕಾರದ ಪಾಲನೆಗಳನ್ನು ಪಾಲಿಸುವಲ್ಲಿ ನಾವು-ನೀವೆಲ್ಲರೂ ಯಶಸ್ವಿಯಾಗಬೇಕು ಎಂದು ಕೊಪ್ಪಳ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ರಾಘವೇಂದ್ರ ಶೆಟ್ಟಿ ಅವರು ತಿಳಿಸಿದ್ದಾರೆ.

ಕೊರೋನ ವೈರಸ್ ಎಂಟ್ರಿಯಾದ ಸಂದರ್ಭದಲ್ಲಿ ಇಡೀ ದೇಶವೇ ಲಾಕ್‌ಡೌನ್ ಆಗಿತ್ತು, ತಿಂಗಳವರೆಗೆ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಹೀಗೆ ಹಲವಾರು ಇಲಾಖೆ ಅಧಿಕಾರಿಗಳು ಹಗಲಿರುಳು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದರು.

ಕೋವಿಡ್ 19 ದೇಶಾದ್ಯಂತ ತುಂಬಾ ಹರಡುವುದರಿಂದ ಜನರು ಜಾಗೃತಿ ವಹಿಸಬೇಕು. ಹೊರಗಡೆ ಅನಗತ್ಯ ಸಂಚಾರ ಮಾಡುವುದು ಬೇಡ. ಈ ಕೊರೋನಾ ರೋಗವನ್ನು ನಮ್ಮ ದೇಶ, ರಾಜ್ಯದಿಂದ ಓಡಿಸೋಣ ರೋಗಕ್ಕೆ ಯಾರು ಭಯಪಡುವ ಅವಶ್ಯಕತೆಯಿಲ್ಲ ಎಂದು ಕೊಪ್ಪಳ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರಾಘವೇಂದ್ರಶೆಟ್ಟಿ ಅವರು ತಿಳಿಸಿದ್ದಾರೆ.

Related