ಬಾಡಿಗೆ ವಿವಾದ ಇಬ್ಬರಿಗೆ ಗಾಯ

  • In Crime
  • August 25, 2021
  • 326 Views

ವಿಜಯಪುರ: ನಗರದ ಶಹಾಪೇಟೆಯಲ್ಲಿ ಮನೆ ಬಾಡಿಗೆ ವಿಚಾರವಾಗಿ ಬುಧವಾರ ನಡೆದ ಹೊಡೆದಾಟದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಪ್ರತಿ ತಿಂಗಳು ನಾಲ್ಕು ಸಾವಿರದಂತೆ ಬಾಡಿಗೆ ಹಣ ಕೊಡಬೇಕಿದ್ದ ಬಾಡಿಗೆದಾರ ಸಂಗಮೇಶ, ಮನೆ ಮಾಲೀಕರ ಮಧ್ಯೆ ಗಲಾಟೆ ನಡೆದಿದೆ. ಪವಿತ್ರಾ ಪಾಟೀಲ್, ಸಿದ್ರಾಮಗೌಡ ಪಾಟೀಲ್ ಅವರ ತಲೆಗೆ ಗಾಯವಾಗಿದ್ದು ಕಲ್ಲು, ಕುರ್ಚಿಯಿಂದ ಹಲ್ಲೆ ಮಾಡಿ, ಪವಿತ್ರಾಳನ್ನು ಎಳೆದಾಡಿದ್ದಾನೆ. ಎಂದು ಗಾಂಧಿಚೌಕ ಠಾಣೆ ಪೋಲಿಸರು ದೂರು ದಾಖಲಾಗಿದೆ.

Related