‘ಧರ್ಮಜಾಗೃತಿ ಧಾರ್ಮಿಕ ಸಭೆ’

‘ಧರ್ಮಜಾಗೃತಿ ಧಾರ್ಮಿಕ ಸಭೆ’

ಚಿಂಚೋಳಿ: ತಾಲೂಕಿನ ಗಾರಂಪಳ್ಳಿ ನೈಸರ್ಗಿಕ ಗುಡ್ಡದಲ್ಲಿ ಮಲ್ಲಯ್ಯ ದೇವಸ್ಥಾನದ ಶ್ರಾವಣ ಮಾಸದ ಮುಕ್ತಾಯ ಸಮಾರಂಭ ಹಾಗೂ ಜಗದ್ಗುರು ಪರಮಪೂಜ್ಯ ಸಿದ್ಧರಾಮ ನಂದ ಪುರಿ ಮಹಾ ಸ್ವಾಮಿಗಳ ಶಿಷ್ಯರಾದ ಲಿಂಗಬೀರ ದೇವರ ಹಾಲುಮತ ತಾಲ್ಲೂಕ ವೇದಿಕೆ ಭಕ್ತರ ಬಳಗದ ವತಿಯಿಂದ ‘ಧರ್ಮಜಾಗೃತಿ’ ಧಾರ್ಮಿಕ ಸಭೆ’ ಸಮಾರಂಭ ಮಾಡಲಾಯಿತು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಲಿಂಗಬೀರದೇವ ರವರು ನಾನು ಈಗಾಗಲೇ 6ಜಿಲ್ಲೆಗಳಲ್ಲಿ ಧರ್ಮ ಪ್ರಚಾರ ಕೈಗೊಂಡಿದ್ದೇನೆ ನನ್ನ ಈ ಅಳಿಲು ಸೇವೆ ನನ್ನ ಸಮಾಜ ಸೇವೆಯೇ ಆಶಯ, ನಾನು ಇಲ್ಲಿಯವರೆಗೆ ದೇವರಲ್ಲಿ ಭಕ್ತಿಯಿಂದ ನಡೆದುಕೊಂಡಿದ್ದೇನೆ ಇದಕ್ಕೆ ಸಾಕ್ಷಿ ನಾನು ಇವತ್ತು ಮಲ್ಲಯ್ಯ ಮುತ್ಯಾ ಪುಣ್ಯ ಸ್ಥಳಕ್ಕೆ ಬಂದಿದ್ದು, ನನ್ನ ಜೀವನ ಕೊನೆಯುಸಿರು ಇರುವ ತನಕ ನನ್ನ ಸಮಾಜಕ್ಕಾಗಿ ನನ್ನ ಪ್ರಾಣವನ್ನು ಮುಡಿಪಾಗಿ ಇಡುತ್ತೇನೆ, ನನ್ನ ವಿಶೇಷವಾದ ಕಾಳಜಿ ನನ್ನ ಸಮಾಜದ ಜನರಿಗೆ ನಾನು ತೀರಿಕೊಂಡ ನಂತರ ನನ್ನ ಶರೀರವನ್ನು ದಾನ ಮಾಡುತ್ತಿದ್ದೇನೆ ಮುಂದಿನ ದಿನಗಳಲ್ಲಿ ವಿಶ್ವಕ್ಕೆ ಗಂಡಾಂತರ ಇರುವ ರೋಗ ಹಾಗೂ ಆಪತ್ತುಗಳು ನಿವಾರಣೆ ಆಗಲಿವೆ, ಅದೇ ರೀತಿ ಮಲ್ಲಯ್ಯ ಮುತ್ಯಾ ನಿಮ್ಮ ಆಸೆ ಎಲ್ಲವೂ ಈಡೇರಿಸಲಿ ಎಂದು ಪ್ರಾರ್ಥಿಸಿ ಕೊಳ್ಳುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಾಲುಮತ ತಾಲ್ಲೂಕ ವೇದಿಕೆ ಅಧ್ಯಕ್ಷ ಗೋಪಾಲ್ ಎಂ.ಪಿ, ತಾಲ್ಲೂಕು ಕುರುಬ ಅಧ್ಯಕ್ಷ ಹಣಮಂತ ಪೂಜಾರಿ, ಗಾರಂಪಳ್ಳಿ ಗ್ರಾಂ.ಪಂ ಅಧ್ಯಕ್ಷ ಮಹೇಶ್ ಗುತ್ತೇದಾರ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಹಣಮಂತ ಹಿರೇಮನಿ, ರವೀಂದ್ರ ಪೂಜಾರಿ, ನರಸಪ್ಪ ಪೂಜಾರಿ, ತುಕಾರಾಮ ಮೇಲಿನ ಕೆರೆ, ವೀರಶೆಟ್ಟಿ, ರೇವಣಸಿದ್ದಪ್ಪ, ರಾಜು ಯಂಪಳ್ಳಿ, ಇನ್ನೂ ಹಲವಾರು ಗ್ರಾಮದ ಮುಖಂಡರು, ಇದ್ದರು.

Related