ಬೆಂಗಳೂರು: ಇಲ್ಲಿನ ಪುಲಿಕೇಶಿ ನಗರದಲ್ಲಿ ಕರ್ನಾಟಕ ಬಹುಜನ ಫೌಂಡೇಶನ್ ಸಂಸ್ಥಾಪಕ ಜಿ.ಎಚ್ ಶಂಕರ್ ಅವರು ಮಂಗಳಮುಖಿಯರು, ಬಡವರಿಗೆ ದಿನಸಿ ಕಿಟ್ ವಿತರಿಸಿದರು.
ಮಾನವ ಹಕ್ಕುಗಳ ಆಯೋಗದ ರಾಜ್ಯ ಕಾರ್ಯದರ್ಶಿಯಾದ ಜಿ.ವಿ ಹೇಮಂತ್ ಅವರ ಸಹಯೋಗದಲ್ಲಿ ಸುಮಾರು 500 ಮಂದಿಗೆ ದಿನಸಿ ಕಿಟ್ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ನಮ್ಮ ಈ ಬಹುಜನ ಫಂಡೇಶನ್ ವತಿಯಿಂದ ಪುಲಿಕೇಶಿ ನಗರದ ಕಡು ಬಡವರು ಹಾಗೂ ಮುಖ್ಯವಾಗಿ ಮಂಗಳಮುಖಿಯರಿಗೆ ದಿನಸಿ ಕಿಟ್ ವಿತರಿಸಲಾಗಿದೆ. ಲಾಕ್ಡೌನ್ ಶುರುವಾದಾಗಿನಿಂದ ಬೇರೆ ಬೇರೆ ವಲಯಗಳಲ್ಲಿ ಪ್ರತಿದಿನ 8000 ಮಂದಿಗೆ ಊಟದ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸರ್ಕಲ್ ಇನ್ಸ್ಪೆಕ್ಟರ್ ರಾವ್ ಗಣೇಶ್ ಅವರು, ಜನರು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕೆಂದು ಮನವಿ ಮಾಡಿದರು. ಇನ್ನು ಮಂಗಳಮುಖಿಯರು ಮಾತನಾಡಿ, ತಮ್ಮ ಸಮುದಾಯಕ್ಕೆ ಸಹಾಯ ಮಾಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನಮ್ಮ ವಾಹಿನಿ ಮೂಲಕ ಮನವಿ ಸಲ್ಲಿಸಿದರು.