ಡಿಕೆಶಿಗೆ ಸಚಿವ ರಮೇಶ್ ತಿರುಗೇಟು

ಡಿಕೆಶಿಗೆ ಸಚಿವ ರಮೇಶ್ ತಿರುಗೇಟು

 

ಬೆಂಗಳೂರು : ಮೆಂಟಲ್‌ಗಳು ಏನೇನೋ ಮಾತಾಡ್ತಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಹೇಳಿಕೆಗೆ ಸಚಿವ ರಮೇಶ್ ಜಾರಕಿಹೊಳಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಮಂಗಳವಾರ ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಡಿಕೆಶಿ ಮೆಂಟಲ್ ಅಂತ ಹೇಳಿರೋ ಹೇಳಿಕೆ ಗಮನಿಸಿದ್ದೇನೆ. ಯಾರು ಮೆಂಟಲ್ ಅಂತ ಸೂಕ್ತ ಸಂದರ್ಭದಲ್ಲಿ ಬಹಿರಂಗ ಪಡಿಸುತ್ತೇನೆ. ಯಾರು ಮೆಂಟಲ್ ಆಗಿದ್ದಾರೆ ಅಂತ ಅವರ ಬಾಡಿ ಲಾಂಗ್ವೇಜ್ ನೋಡಿನೇ ತಿಳಿದುಕೊಳ್ಳಬಹುದು ಎಂದು ರಮೇಶ್ ಜಾರಕಿಹೊಳಿ ಅವರು ಡಿಕೆಶಿಗೆ ಟಾಂಗ್ ನೀಡಿದ್ದಾರೆ.

ಲಾಕ್ ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ಥರಿಗೆ ಇಲ್ಲಿಯವರೆಗೂ ಒಂದು ರೂಪಾಯಿ ಸಹ ಸಿಕ್ಕಿಲ್ಲ ಎಂದು ಡಿಕೆ ಶಿವಕುಮಾರ್ ಆರೋಪ ಮಾಡಿದ್ದಾರೆ.
ಸಿಎಂಗೆ ಡಿಕೆಶಿ ವಾರ್ನಿಂಗ್

ರೈತರಿಗೆ, ಕಾರ್ಮಿಕರಿಗೆ, ಅಸಂಘಟಿತ ಕಾರ್ಮಿಕ ಯಾರಿಗೂ ಹಣ ಸಿಕ್ಕಿಲ್ಲ. ಯಾರೂ ಅರ್ಜಿ ಹಾಕಿ ಹೋಗಿದ್ದಾರೆ ಅವರಿಗೆ ಸಹಾಯ ಮಾಡಬೇಕು. ಇಲ್ಲದಿದ್ದರೆ, ಸಂತ್ರಸ್ತರ ಪರವಾಗಿ ನಾವು ಧ್ವನಿ ಎತ್ತಿ ಹೋರಾಟ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಟ್ವಿಟ್ಟರ್ ಖಾತೆಯಲ್ಲಿ ಡಿಕೆ ಶಿವಕುಮಾರ್ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಈಗಾಗಲೇ ಹಲವು ವಲಯಗಳಿಗೆ ಪರಿಹಾರ ಘೋಷಣೆ ಮಾಡಿದ್ದು, ಆ ಹಣ ಇನ್ನೂ ಸಂತ್ರಸ್ಥರಿಗೆ ಸೇರಿಲ್ಲ ಎಂದು ಡಿಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.

ಸದ್ಯ ರಮೇಶ್ ಕತ್ತಿ, ಪ್ರಭಾಕರ್ ಕೋರೆಯವರು ಬೇಸರಗೊಂಡಿಲ್ಲ. ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟಿದ್ದು ಅವರಿಗೂ ಖುಷಿಯಾಗಿದೆ. ನಾವು ಬೆಳಗಾವಿ ನಾಯಕರು ಮತ್ತೆ ಸಭೆ ಸೇರುತ್ತೇನೆ. ನಾವೆಲ್ಲಾ ಊಟಕ್ಕೆ ಆಗಾಗ ಸೇರೋದು ಮೊದಲಿಂದಲೂ ಪದ್ಧತಿ. ಅದರಲ್ಲಿ ಯಾವುದೇ ತಪ್ಪು ಹುಡುಕುವ ಅಗತ್ಯವಿಲ್ಲ ಎಂದು ರಮೇಶ್ ಜಾರಕಿಹೊಳಿ ಅವರು ಮಾತನಾಡಿದರು.

Related