ರಾಜ್ಯಸಭಾ ಸದಸ್ಯ ಆಶೋಕ ಗಸ್ತಿಗೆ ಸನ್ಮಾನ

ರಾಜ್ಯಸಭಾ ಸದಸ್ಯ ಆಶೋಕ ಗಸ್ತಿಗೆ ಸನ್ಮಾನ

ದೇವದುರ್ಗ : ಬಿಜೆಪಿಯ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಇವರ ಆಗಮನ ಹಾಗೂ ಜಿಲ್ಲಾ ಬಿಜೆಪಿಯ ಕೋರ್ ಕಮಿಟಿ ಸಭೆಯ ಹಿನ್ನೆಲೆಯಲ್ಲಿ  ಪಟ್ಟಣಕ್ಕೆ ಪ್ರಪ್ರಥಮ ಬಾರಿಗೆ ಆಗಮಿಸಿದ ನೂತನ ರಾಜ್ಯಸಭಾ ಸದಸ್ಯರಾದ ಅಶೋಕ ಗಸ್ತಿ ಇವರನ್ನು ಶ್ರೀ ಸವಿತಾ ಮಹರ್ಷಿ ಸಂಘದ ಕೇಂದ್ರಸ್ಥಾನದಲ್ಲಿ ತಾಲೂಕು ಸವಿತಾ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅಶೋಕ ಗಸ್ತಿಯವರು, ಚಿಕ್ಕ ಸಮಾಜದಲ್ಲಿ ಜನಿಸಿದ ನಾನು ವೃತ್ತಿಯಲ್ಲಿ ವಕೀಲನಾಗಿದ್ದರೂ ಪಕ್ಷನಿಷ್ಟೆ ಮತ್ತು ಪ್ರಾಮಾಣಿಕತೆಗೆ ಬಿಜೆಪಿ ನನಗೆ ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಿದ ಕಾರಣಕ್ಕೆ ಸನ್ಮಾನಿಸಿದ ತಮ್ಮೆಲ್ಲರಿಗೂ ಋಣಿಯಾಗಿದ್ದೇನೆ ಎಂದು ಹೇಳಿದರು

ಈ ಸಂಸ್ಕೃತ ಸಮಾಜ ಬಂಧುಗಳಾದ ನಾವೆಲ್ಲರೂ ಬರುವ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಹಾಗೂ ಮನುಷ್ಯನಿಗೆ ಮಾರಕವಾದ ಹಾಗೂ ಕಾನೂನಿಗೆ ವಿರುದ್ಧವಾದ ದುಶ್ಚಟಗಳಿಂದ ದೂರವಿದ್ದಾಗ ಮಾತ್ರ ನಮ್ಮಂಥವರನ್ನು ಸನ್ಮಾನಿಸಿದ ತಮಗೂ ಸಮಾಜಕ್ಕೂ ಉತ್ತಮ ಸಂದೇಶ ಬರುತ್ತದೆ ಎಂದು ಹೇಳಿದರು.

Related