ಸೂರಿಗಾಗಿ ಕಣ್ಣೀರಿಡುತ್ತಿರುವ ಗರ್ಭಿಣಿ

ಸೂರಿಗಾಗಿ ಕಣ್ಣೀರಿಡುತ್ತಿರುವ ಗರ್ಭಿಣಿ

ರಾಯಚೂರು: ಅಧಿಕಾರಿಗಳು ಗರ್ಭಿಣಿ ಮಹಿಳೆಯ ಗುಡಿಸಲು ಕೆಡವಿದ್ದು, ವಸತಿ ಸೌಲಭ್ಯ ಕಲ್ಪಿಸಿಕೊಡುವಂತೆ ಡಿಸಿಎಂ ಲಕ್ಷö್ಮಣ ಸವದಿ ಅವರ ಕಾಲಿಗೆ ಬಿದ್ದು ಕಣ್ಣೀರಿಟ್ಟ ಘಟನೆ ನಡೆದಿದೆ.

ದೇವದುರ್ಗದ ಸಿದ್ಧಾಪುರ ಗ್ರಾಮದ ಈ ಮಹಿಳೆ ಪ್ರವಾಹದಲ್ಲಿ ಸೂರು ಕಳೆದುಕೊಂಡಿದ್ದರು. ಸರ್ಕಾರ ನಿವೇಶನಗಳನ್ನು ಮಂಜುರು ಮಾಡಿತ್ತು. ಆದರೆ ಮನೆಗಳನ್ನು ನೀಡಿರಲಿಲ್ಲ. ವಿಧಿಯಿಲ್ಲದೇ ಸರ್ಕಾರ ಗುರುತಿಸಿದ ಸ್ಥಳದಲ್ಲಿ ವಾಸವಿದ್ದ ಬಡವರ ಗುಡಿಸಲನ್ನು ಅಧಿಕಾರಿಗಳು ನೆಲಸಮಗೊಳಿಸಿ ಕಿರುಕುಳ ನೀಡಿದ್ದಾರೆ.

ಸಾರಿಗೆ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಸವದಿ ಕಾಲಿಗೆ ಬಿದ್ದು ಅಂಗಲಾಚಿದರು. ಸಾಂತ್ವನ ಹೇಳಿ ಕೂಡಲೇ ರ‍್ಭಿಣಿ ವಾಸಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿ ವೆಂಕಟೇಶ ಕುಮಾರ್ ಸೂಚಿಸಿದರು.

Related