ನವದೆಹಲಿ : ಮೂರು ಕೃಷಿ ಕಾನೂನುಗಳನ್ನು ರದ್ದು ಮಾಡದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿರುವ ರೈತರೊಂದಿಗೆ ನನ್ನ ಹೃದಯ ಇದೆ’ ಎಂದು ಶುಕ್ರವಾರ ಹೇಳಿದರು.
ಹೊಸ ವರ್ಷವು ಆರಂಭವಾಗುತ್ತಿದ್ದಂತೆ, ಕಳೆದುಕೊಂಡವರನ್ನು ನಾವು ಸ್ಮರಿಸುತ್ತೇವೆ ಮತ್ತು ನಮಗಾಗಿ ರಕ್ಷಣೆ ಮತ್ತು ತ್ಯಾಗ ಮಾಡುವ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಅನ್ಯಾಯದ ವಿರುದ್ಧ ಹೋರಾಟ ಮಾಡುವ ರೈತರು, ಕಾರ್ಮಿಕರೊಂದಿಗೆ ನನ್ನ ಹೃದಯವಿದೆ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದರು.