ಪಂಜಾಬ್ ನೂತನ ಸಿಎಂ ಚರಣ್ ಜೀತ್ ಸಿಂಗ್ ಚನ್ನಿ ಆಯ್ಕೆ : ಸಿಹಿ ಹಂಚಿಕೆ

ಪಂಜಾಬ್ ನೂತನ ಸಿಎಂ ಚರಣ್ ಜೀತ್ ಸಿಂಗ್ ಚನ್ನಿ ಆಯ್ಕೆ : ಸಿಹಿ ಹಂಚಿಕೆ

ಚಿಂಚೋಳಿ: ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಮಾಜದ ಮುಖಂಡರು ಪಂಜಾಬ್‍ನ ನೂತನ ದಲಿತ ಮುಖ್ಯಮಂತ್ರಿ ಚರಣ್ ಜೀತ್ ಸಿಂಗ್ ಚನ್ನಿ, ಆಯ್ಕೆ ಆಗಿರುವುದಕ್ಕೆ ಸಿಹಿ ಹಂಚಿ ಪಟಾಕಿ ಸಿಡಿಸಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಹಸಿರುಕ್ರಾಂತಿಯ ಪಿತಾಮಹ ಬಾಬೂ ಜಗಜೀವನ್ ರಾವ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಉಲ್ಲಾಸ್ ಕೆರೋಳ್ಳಿ, ಸುರೇಶ್ ಶೇರಿಕರ್, ಒಮನ ರಾವ್ ಕೊರವಿ, ಗುಂಡು ಪಸ್ ಪುರ್, ಮಾರುತಿ ಗಾರಂಪಳ್ಳಿ, ದತ್ತಾತ್ರೇಯ ಕಲಭಾವಿ, ಧೂಳಪ್ಪ ಲೋಕೇಶ್ ಬಸವರಾಜ ಮೇತ್ರಿ ಇನ್ನೂ ಹಲವಾರು ದಲಿತ ಮುಖಂಡರು ಉಪಸ್ಥಿತರಿದ್ದರು.

Related