ಖಾಸಗೀಕರಣ ಕೈಬಿಡಲು ಪ್ರತಿಭಟನೆ

ಖಾಸಗೀಕರಣ ಕೈಬಿಡಲು ಪ್ರತಿಭಟನೆ

ಕಲಬುರಗಿ : ವಿದ್ಯುತ ಖಾಸಗೀಕರಣ ಸೇರಿದಂತೆ ಎಲ್ಲ ಹಂತದ ಖಾಸಗೀಕರಣವನ್ನು ಕೈಬಿಡುವಂತೆ ಆಗ್ರಹಿಸಿ ಎಐಯುಟಿಯು-ಸಿ ಸಂಘಟನೆಯ ನೇತೃತ್ವದಲ್ಲಿಂದು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನ ಕೈಗೊಂಡ ಸಂಘಟನೆಯ ಕಾರ್ಯಕರ್ತರು, ಉತ್ತರ ಪ್ರದೇಶದ ವಿದ್ಯುತ ಖಾಸಗೀಕರಣದ ವಿರುದ್ದ ನಡೆಸುತ್ತಿರುವ ಚಳವಳಿಗಾರರ ಮೇಲಿನ ದಬ್ಬಾಳಿಕೆ ತಡೆಯಬೇಕು.

ಸಾರ್ವಜನಿಕ ವಲಯಗಳನ್ನು ಮತ್ತು ಸರ್ಕಾರಿ ಸೌಮ್ಯದ ಸಂಸ್ಥೆಗಳನ್ನು ಖಾಸಗಿ ಕಾರ್ಪೋರೆಟ್ ಕಂಪನಿಗಳಿಗೆ ಮಾರಾಟ ಮಾಡುವುದನ್ನು ಕೈಬಿಟ್ಟು, ಕಾರ್ಮಿಕರ ಹಿತಕಾಪಾಟಬೇಕು ಎಂಬ ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಆಲ್ ಇಂಡಿಯಾ ಯುನೈಟೆಡ್ ಟ್ರಡ್ ಯುನಿಯನ್ ಸೆಂಟರ್ ಆಫ್ ಇಂಡಿಯ ಎಐಯುಟಿಯು-ಸಿ ಸಂಘಟನೆಯ ಜಿಲ್ಲಾ ಮುಖಂಡರಾದ ಎಸ್.ಎಂ.ಶರ್ಮಾ ಮತ್ತು ಮಲ್ಲಿನಾಥ ಪಾಟೀಲ ಸೇರಿದಂತೆ ಹಲವರಿದ್ದರು

Related