ಪ್ರಗತಿ ಕಾಮಗಾರಿ ಪರಿಶೀಲನೆ

  • In State
  • September 29, 2021
  • 462 Views
ಪ್ರಗತಿ ಕಾಮಗಾರಿ ಪರಿಶೀಲನೆ

ಶಹಾಪುರ: ಸುಗಮ ಸಂಚಾರಕ್ಕಾಗಿ ತಾಲೂಕಿನ ಭೀಮರಾಯನ ಗುಡಿಯಿಂದ ಬಿಜಾಸ್ಪುರ್ ಗ್ರಾಮದ ವರೆಗೆ 2018-19ನೇ ಸಾಲಿನ 8.5 ಕಿ.ಮೀವರೆಗೆ 9 ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಪ್ರಗತಿಯಲಿದ್ದು, ಕಾಮಗಾರಿ ಸ್ಥಳಕ್ಕೆ ಈಶಾನ್ಯ ವಲಯದ ಮುಖ್ಯ ಅಭಿಯಂತರರಾದ ಜಗನಾಥ ಹಲೀಂಗೆ ಅವರು ಬುಧವಾರ ಪರಿಶೀಲಿಸಿದರು.
ರಸ್ತೆಯು ಕಡಿಮೆ ಅಳತೆಯಿಂದ ಕೂಡಿದ್ದು, ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಕಾಲಾವಕಾಶವಿದೆ. ಗುಣಮಟ್ಟದಿಂದ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಮುಂದೆ ರಸ್ತೆ ಸಂಚಾರಕ್ಕೆ ಅನೂಕೂಲವಾಗುವಂತೆ, ಬಾಳಿಕೆ ಬರುವಂತಹ ವಸ್ತುಗಳನ್ನು ಬಳಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಕಾರ್ಯನಿರ್ವಹಕ ಅಭಿಯಂತರರಾದ ಅಮೀನ್ ಮುಕ್ತಾರ ಅಹ್ಮದ್, ಎಇಇ ಸಿದ್ದಲಿಂಗಪ್ಪ ಐರೆಡ್ಡಿ, ಎಇ ಮರೆಪ್ಪ, ಸೇರಿದಂತೆ ಇಲಾಖಾ ಅಧಿಕಾರಿಗಳು, ಗುತ್ತಿಗೆದಾರರು ಇದ್ದರು.

Related