ಕಮಲನಗರ : ಠಾಣಾಕುಶನೂರ ಗ್ರಾಮದಲ್ಲಿ ಕಾಂಗ್ರೆಸ್ ಸಭೆ ಏರ್ಪಡಿಲಾಗಿದ್ದು, ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಭೀಮಸೇನರಾವ್ ಸಿಂದೆ ಮಾತನಾಡಿದ್ದು, ‘ಕಾರ್ಯಕರ್ತರು, ಪದಾಧಿಕಾರಿಗಳು ಸೇರಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ, ಮುಂಬರುವ ಜಿ.ಪಂ , ತಾ.ಪಂ ಚುನಾವಣೆಗೆ ಸಿದ್ಧತೆ ಮಾಡಿಕೊಂಡು ಗೆಲುವಿಗಾಗಿ ಶ್ರಮಿಸಬೇಕು’ ಎಂದು ಗುರುವಾರ ಸೂಚನೆ ನೀಡಿದರು.
ಸೋನಾಳ ಗ್ರಾಮದ ಮುಖಂಡ ಕಲ್ಯಾಣರಾವ್ ಬಿರಾದಾರ ಮಾತನಾಡಿ, ಕೆಪಿಸಿಸಿ ಕಾರ್ಯಧ್ಯಕ್ಷ, ಶಾಸಕ ಈಶ್ವರ ಖಂಡ್ರೆ ನೇತೃತ್ವದಲ್ಲಿ ಪಕ್ಷವನ್ನು ಕಟ್ಟಿರುವ ಜಿಮ್ಮೆದಾರಿ ಪ್ರಮಾಣಿಕವಾಗಿ ನಿಭಾಯಿಸಿ. ಔರಾದ, ಕಮಲನಗರ ತಾಲೂಕಿನಲ್ಲಿ ಪಕ್ಷವನ್ನು ಬಲಪಡಿಸಲು ನಿಷ್ಠಾವಂತ ಕಾರ್ಯಕರ್ತರು ಮುಂದಾಗಬೇಕು ಎಂದು ಪ್ರೇರೇಪಿಸಿದರು.
ಕಾಂಗ್ರೆಸ್ ಹಿರಿಯ ಕಾರ್ಯಕರ್ತ ಜಗನ್ನಾಥ ಪಸರಗೆ, ಚಾಂದಪಾಶಾ, ಗಣಪತಿ ಬಿರಾದಾರ, ಅರ್ಜುನ ಕಾಂಬಳೆ, ಗೌಸಮಿಯ್ಯಾ, ಅಬ್ದುಲ್ ರೆಹಮಾನ್, ಪ್ರಶಾಂತ ಕುಂದೆ, ಗಂಗಾರಾಮ ಮಾನೂರೆ, ಗುಂಡಪ್ಪ ಬ್ರಹ್ಮಾನಂದ ಕೋರೆ ಇನ್ನಿತರರಿದ್ದರು.