ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಧ್ರುವ ಸರ್ಜಾ ಭೇಟಿ

ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಧ್ರುವ ಸರ್ಜಾ ಭೇಟಿ

ದೊಡ್ಡಬಳ್ಳಾಪುರ : ಮೇಘನಾ ರಾಜ್ ಹಾಗೂ ಮಗುವಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಧ್ರುವ ಸರ್ಜಾ ಮತ್ತು ಅವರ ಕುಟುಂಬ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ಮೇಘನಾ ರಾಜ್ ಮತ್ತು ಮಗು ಬೇಗ ಚೇತರಿಸಿಕೊಳ್ಳುವಂತೆ ಪ್ರಾರ್ಥನೆ ಸಲ್ಲಿಸಿದರು.

ಚಿರಂಜೀವಿ ಅಗಲಿಕೆಯ ನಂತರ ಮೇಘನಾ ರಾಜ್ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿನ ನಾಮಕರಣದ ಸಿದ್ದತೆಯಲ್ಲಿರುವಾಗ ಮೇಘನಾ ರಾಜ್ ಸೇರಿದಂತೆ ಮಗು ಮತ್ತು ಅಪ್ಪ ಸುಂದರ್ ರಾಜ್ ಮತ್ತು ಅಮ್ಮ ಪ್ರಮೀಳಾ ಜೋಷಾಯ್ ಅವರಿಗೆ ಕೊರೋನಾ ಸೋಂಕು ತಗುಲಿತ್ತು. ಸದ್ಯ ಈಗ ಎಲ್ಲರೂ ಚೇತರಿಸಿಕೊಂಡಿಜದರು.

ಧ್ರುವ ಸರ್ಜಾ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ದಿಢೀರ್ ಭೇಟಿ ನೀಡಿದ ಹಿನ್ನೆಲೆ ಸಾಮಾನ್ಯರಂತೆ ಆಗಮಿಸಿದ ಧ್ರುವ ಸರ್ಜಾ ಜೊತೆ ಸೆಲ್ಪಿಗೆ ಅಭಿಮಾನಿಗಳು ಮುಗಿಬಿದ್ದರು.

Related