ಪದಗ್ರಹಣ : ಗಣ್ಯರಿಂದ ಉದ್ಘಾಟನೆ

ಪದಗ್ರಹಣ : ಗಣ್ಯರಿಂದ ಉದ್ಘಾಟನೆ

ಹುನಗುಂದ : ಭಾರತೀಯ ಜನತಾ ಪಕ್ಷದ ಹುನಗುಂದ ಮತಕ್ಷೇತ್ರದ ಗ್ರಾಮೀಣ ಹಾಗು ನಗರ ಮಂಡಲ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಸೋಮವಾರ ಹುನಗುಂದದಲ್ಲಿ ನಡೆಯಿತು.

ಪದಗ್ರಹಣವನ್ನು ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪ ವೃಷ್ಠಿ ಮಾಡಿ, ಸಸಿಗೆ ನೀರೆರೆಯುವ ಮೂಲಕ ಜನಪ್ರಿಯ ಶಾಸಕ ದೊಡ್ಡನಗೌಡ ಜಿ. ಪಾಟೀಲ್ ಉದ್ಘಾಟಿಸಿದರು. ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಬಿಜೆಪಿ ಕಾರ್ಯವೈಖರಿ ಬಗ್ಗೆ ವಿವರಿಸಿದರು.

ಈ ವೇಳೆ ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಅನಿಲಕುಮಾರ ಬಂಡರಗಲ್ಲ ಹಾಗೂ ಗ್ರಾಮೀಣ ಹಾಗೂ ನಗರದ ವಿವಿಧ ಮಂಡಲಗಳ ನೂತನ ಪದಾಧಿಕಾರಿಗಳಿಗೆ ಪಕ್ಷದ ಧ್ವಜ ನೀಡಲಾಯಿತು.

ಕಾರ್ಯಕ್ರಮದಲ್ಲಿ ಬಿಜೆಪಿ ಬಾಗಲಕೋಟೆ ಜಿಲ್ಲಾಧ್ಯಕ್ಷ ಶಾಂತಕುಮಾರ ಪಾಟೀಲ, ಬಿಜೆಪಿ ತಾಲೂಕು ಅಧ್ಯಕ್ಷ ಮಹಾಂತಗೌಡ ತೊಂಡಿಹಾಳ, ಬಿಜೆಪಿ ಮುಖಂಡರಾದ ಅರವಿಂದ ಮಂಗಳೂರ, ಜಿ.ಪಿ.ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

Related