ನೀರಿಗಾಗಿ ಜನರು ಪರದಾಟ

ನೀರಿಗಾಗಿ ಜನರು ಪರದಾಟ

ದೇವದುರ್ಗ : ಸರ್ಕಾರ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಕೋಟಿಗಟ್ಟಲೆ ಹಣವನ್ನು ವ್ಯಯ ಮಾಡುತ್ತಿದೆ. ಆದರೆ, ಅಂತಹ ಯೋಜನೆಗಳಿಗೆ ಹಣ ಮಾತ್ರ ಪೋಲಾಗಿದೆ ಹೊರತು ಜನರಿಗೆ ಹನಿ ನೀರು ಸಹ ಸಿಗುತ್ತಿಲ್ಲ. ಹನಿ ನೀರಿಗಾಗಿ ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಸಮೀಪದ ಕ್ಯಾದಿಗ್ಗೇರಾ ಗ್ರಾಮದ ಜನರಿಗೆ ಕುಡಿಯಲು ನೀರು ಸಿಗದೆ ಪರದಾಡುವಂತಾಗಿದೆ. ಸ್ಥಳೀಯವಾಗಿ ಗ್ರಾ.ಪಂ ಕಾರ್ಯಾಲಯ ಹಾಗೂ ತಾಪಂ ಕ್ಷೇತ್ರ ಮತ್ತು ಜಿಪಂ ಕ್ಷೇತ್ರಗಳನ್ನು ಒಳಗೊಂಡಿದ್ದರೂ ಸಹ ಇಲ್ಲಿನ ಜನರಿಗೆ ಸಮರ್ಪಕವಾಗಿ ಕುಡಿಯಲು ನೀರು ಸಿಗುತ್ತಿಲ್ಲ. ಇದರಿಂದ ರೋಸಿ ಹೋಗಿದ್ದಾರೆ ಕುಡಿಯಲು ನೀರು ಸಿಗದಿರುವುದಕ್ಕೆ ಅಧಿಕಾರಿಗಳಿಗೆ ಹಿಡಿ ಶಾಪವನ್ನು ಹಾಕುತ್ತಿದ್ದಾರೆ.

ಇಷ್ಟೆಲ್ಲ ಸರ್ಕಾರದ ಹಣವನ್ನು ಬಳಕೆ ಮಾಡಿದರೂ ಗ್ರಾಮದ ಜನರಿಗೆ ಕುಡಿಯುವ ನೀರು ಪೂರೈಕೆ ಆಗದಿರುವುದು ದುರದೃಷ್ಟಕರ ಸಂಗತಿ, ಈ ಅನುದಾನವೆಲ್ಲ ಎಲ್ಲಿ ಹೊಯಿತು ನೀರು ಯಾಕೆ ಬರುತ್ತಿಲ್ಲ ಎನ್ನುವುದು ಗ್ರಾಮಸ್ಥರ ಯಕ್ಷ ಪ್ರಶ್ನೆಯಾಗಿದೆ.?

Related