ಚಾಮರಾಜಪೇಟೆ ಮೈದಾನ ವಿಚಾರಕ್ಕೆ ಪಿಸಿ ಮೋಹನ್ ಎಂಟ್ರಿ..!

  • In State
  • July 15, 2022
  • 217 Views
ಚಾಮರಾಜಪೇಟೆ ಮೈದಾನ ವಿಚಾರಕ್ಕೆ ಪಿಸಿ ಮೋಹನ್ ಎಂಟ್ರಿ..!

ಚಾಮರಾಜ ಪೇಟೆ ಆಟದ ಮೈದಾನದ ವಿಚಾರ ಮಾತನಾಡಿದ ಸಂಸದ ಪಿಸಿ ಮೋಹನ್, ಬಂದ್ ಗೆ ಕರೆ ಕೊಡಲಾಗಿತ್ತು, ಜನರೆಲ್ಲ ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ್ರು. ಆಟದ ಮೈದಾನದ ವಿಚಾರ ಚರ್ಚೆ ಮಾಡಲು ಆಯುಕ್ತರ ಕಚೇರಿಗೆ ಬಂದಿದ್ದೇನೆ.

ಬೆಂಗಳೂರು, ಜು 15 : ಚಾಮರಾಜಪೇಟೆ ಮೈದಾನ ಕುರಿತು ಬಂದ್ ಆಯಿತು. ಅದೇ ಉತ್ಸಾಹದಲ್ಲಿ ಇದೀಗ ಮತ್ತಷ್ಟು ಹೋರಾಟಕ್ಕೆ ನಾಗರಿಕ ಒಕ್ಕೂಟ ವೇದಿಕೆ ಮುಂದಾಗಿದೆ. ಈ ಬಾರಿ ಫೀಲ್ಡಿಗೆ ಸ್ಥಳೀಯ ಸಂಸದ ಪಿ ಸಿ ಮೋಹನ್ ಕಣಕ್ಕಿಳಿದಿದ್ದಾರೆ. ಇಂದಾದ ಬೆಳವಣಿಗೆ ಏನು?  ಕಳೆದೊಂದು ತಿಂಗಳಿನಿಂದ ಚಾಮರಾಜಪೇಟೆ ಈದ್ಗಾ ಮೈದಾನ ಭೂ ಮಾಲೀಕತ್ವ ವಿವಾದ ಚರ್ಚೆಯಲ್ಲಿದೆ. ಸದ್ಯ ಈ ಮೈದಾನ ಯಾರಿಗೆ ಸೇರಿದ್ದು ಎಂಬ ಕುರಿತು ಬಿಬಿಎಂಪಿ ವರ್ಸಸ್ ವಕ್ಫ್ ಬೋರ್ಡ್ ದಾಖಲೆಗಳ ಮೇಲಾಟ ಮುಂದುರಿದಿದೆ. ಇದೀಗ ಈ ಮೈದಾನ ರಾಜಕೀಯ ತಿರುವು ಪಡೆದಿದೆ.

ಕೆಲ ದಿನಗಳ ಹಿಂದೆ ತನ್ನ ಬೆಂಬಲಿಗರ ಸಭೆ ಕರೆದ ಸ್ಥಳೀಯ ಜಮೀರ್ ಅಹ್ಮದ್ ಟಾಂಗ್ ಕೊಡುವಂತೆ ಇಂದು ನಾಗರಿಕ ಒಕ್ಕೂಟ ವೇದಿಕೆ ಜೊತೆ ಬಿಜೆಪಿ ಸಂಸದ ಪಿ ಸಿ ಮೋಹನ್ ಕಾಣಿಸಿಕೊಂಡರು. ಇಂದು ಬಿಬಿಎಂಪಿ ಕಮಿಷಿನರ್ ತುಷಾರ್ ಗಿರಿನಾಥ್ ಭೇಟಿ ಮಾಡಿ ಮೈದಾನ ಕುರಿತು ಸಂಸದ ಪಿ ಸಿ ಮೋಹನ್ ಪ್ರತ್ಯೇಕ ಮನವಿ ಪತ್ರ ಸಲ್ಲಿಸಿದರು‌‌.

 

Related