ಸೋಂಕಿತರಿಂದ ಹಣ ವಸೂಲಿ

ಸೋಂಕಿತರಿಂದ ಹಣ ವಸೂಲಿ

ಆನೇಕಲ್ : ಕೊರೋನ ಸೋಂಕಿತರು ಬೆಡ್ಡುಗಳಿಲ್ಲ ಎಂದು ಆಸ್ಪತ್ರೆಗೆ ಸೇರಿಸಿಕೊಳ್ಳದೆ ಹಾಗೂ ಕೊರೋನ ಸೋಂಕಿತರಿಂದ ಹೆಚ್ಚಿನ ಹಣ ವಸೂಲಿಗೆ ಮಾಡುತ್ತಿದ ಜಿಗಣಿಯ ಸುಹಾಸ್, ವಿಜಯಶ್ರೀ ಹಾಗೂ ಚಂದಾಪುರ ಆತ್ರೇಯ ಖಾಸಗಿ ಆಸ್ಪತ್ರೆಗಳ ಮೇಲೆ ತಹಶೀಲ್ದಾರ್ ಹಾಗೂ ಆರೋಗ್ಯ ಅಧಿಕಾರಿಗಳು ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಹಸಿಲ್ದಾರ್ ಮಹದೇವಯ್ಯನವರು ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರ ಇಷ್ಟು ಬೆಡ್ಡುಗಳನ್ನು ಕೊಡಬೇಕೆಂದು ನಿಗದಿ ಮಾಡಿದರು. ನಾವು ಕೊರೋನ ಸೋಂಕಿತರನ್ನು ದಾಖಲು ಮಾಡಿಕೊಳ್ಳುವುದಿಲ್ಲ ಎಂದು ಆಸ್ಪತ್ರೆಗಳಿಂದ – ಆಸ್ಪತ್ರೆಗೆ ಅಲೆದಾಡುಸುತ್ತಿದ್ದರು, ತಾಲೂಕಿನಾದ್ಯಂತ ಸಂಘಟನೆಗಳು ಧರಣಿ ಪ್ರತಿಭಟನೆ ಮಾಡುತ್ತಿದ್ದವೆ.

ಅಷ್ಟೇ ಅಲ್ಲದೇ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಂದ ಸರ್ಕಾರ ನಿಗದಿ ಪಡಿಸಿರುವುದಕ್ಕಿಂತ ಹೆಚ್ಚಿನ ಹಣವನ್ನು ಖಾಸಗಿ ಆಸ್ಪತ್ರೆಗಳು ಸುಲಿಗೆ ಮಾಡುತ್ತಿವೆ ಎಂಬ ಸಾರ್ವಜನಿಕ ದೂರಿನ ಮೇರೆಗೆ ಎಲ್ಲಾ ಆಸ್ಪತ್ರೆಗಳಿಗೆ ಸರ್ಕಾರಿ ನೋಟಿಸ್ ನೀಡಲಾಗಿದೆ.

ಕೆಲವು ಖಾಸಗಿ ಆಸ್ಪತ್ರೆಗಳು ನೋಟಿಸ್ ಗೆ ಸ್ಪಂದಿಸದ ಕಾರಣ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆಯನ್ನು ಮಾಡಲಾಗುತ್ತಿದೆ. ಯಾವ ಆಸ್ಪತ್ರೆ ಸ್ಪಂದಿಸುತ್ತಿಲ್ಲ ಅಂತಹವರ ವಿರುದ್ಧ ಪ್ರಕರಣ ದಾಖಲು ಮಾಡಿ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

Related