ಸಚಿವ ಸ್ಥಾನ ಬೇಡ: ಡಿಸಿಎಂ ಸ್ಥಾನ ವಿರಲಿ

ಸಚಿವ ಸ್ಥಾನ ಬೇಡ: ಡಿಸಿಎಂ ಸ್ಥಾನ ವಿರಲಿ

ಜೇವರ್ಗಿ : ಕಲ್ಯಾಣ ಕರ್ನಾಟಕ ಶ್ರೀರಾಮುಲು ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು, ಅಭಿಮಾನಿಗಳ ಸಂಘದ ಅಧ್ಯಕ್ಷರಾದ ನಿಂಗು ದೊರೆ ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ  ಮಾತನಾಡಿದ ನಿಂಗು ದೊರೆ ಅವರು, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆರೋಗ್ಯ ಸಚಿವರಾಗಿದ್ದ ಬಿ. ಶ್ರೀರಾಮುಲು ಆರೋಗ್ಯ ಇಲಾಖೆ ಖಾತೆಯನ್ನು ಮುಖ್ಯಮಂತ್ರಿಗಳು ಕಿತ್ತು ಬೃಹತ್ ಎನ್ನಬಹುದಾದ ಸಮಾಜ ಕಲ್ಯಾಣ ಇಲಾಖೆ ಖಾತೆಯನ್ನು ನೀಡಿ, ಶ್ರೀರಾಮುಲು ಅಭಿಮಾನಿಗಳಿಗೆ ಅಸಮಾದಾನವನ್ನು ಉಂಟು ಮಾಡಿದ್ದಾರೆ.

ಎರಡು ಖಾತೆ ಕಿತ್ತು ಕೊಂಡು ಒಂದು ಖಾತೆ ಕೊಡುವ ಮೂಲಕ ಮತ್ತೆ ಶ್ರೀ ರಾಮುಲುರನ್ನು ಕೆಣಕುತ್ತಿರುವ ಬಿಜೆಪಿ ಪಕ್ಷ ಕೆಲವು ನಾಯಕರು ಶ್ರೀ ರಾಮುಲು ವಿರುದ್ದ ಶಂಡತನದ ರಾಜಕೀಯ ಮಾಡುತ್ತಿರು ನಾಯಕರಿಗೆ ಕಲ್ಯಾಣ ಕರ್ನಾಟಕ ಬಿ. ಶ್ರೀ ರಾಮುಲು ಅಭಿಮಾನಿಗಳ ಸಂಘದಯಿಂದ ಖಂಡಿಸುತ್ತೆವೆ.

ನಮ್ಮ ನಾಯಕನಿಗೆ ಸಚಿವ ಸ್ಥಾನ ಬೆಡ ಶ್ರೀರಾಮುಲು ಅವರಿಗೆ ರಾಜ್ಯದ ಉಪಮುಖ್ಯಮಂತ್ರಿ ನೀಡಬೇಕೆಂದು ಕಲ್ಯಾಣ ಕರ್ನಾಟಕ ಶ್ರೀರಾಮುಲು ಅಭಿಮಾನಿಗಳ ಸಂಘದಿಂದ ಮುಖ್ಯಮಂತ್ರಿಗಳಿಗೆ ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸುತ್ತೇವೆ ಎಂದು ನಿಂಗು ದೊರೆ ಹೇಳಿದರು.

Related