ಸಾರಿಗೆ ಸಂಸ್ಥೆ ಮುಚ್ಚಲಿದೆ ಭಯ ಬೇಡ : ಲಕ್ಷ್ಮಣ ಸವದಿ

ಸಾರಿಗೆ ಸಂಸ್ಥೆ ಮುಚ್ಚಲಿದೆ ಭಯ ಬೇಡ : ಲಕ್ಷ್ಮಣ ಸವದಿ

ದಾವಣಗೆರೆ : ಸಾರಿಗೆ ನಿಗಮಕ್ಕೆ 4 ಸಾವಿರ ಕೋಟಿ ರೂ. ನಷ್ಟವಾಗಿದೆ. ಆದರೆ ನಷ್ಟದಿಂದ ಸಾರಿಗೆ ಸಂಸ್ಥೆ ಮುಚ್ಚಲಿದೆ ಅನ್ನೋ ಭಯ ಬೇಡ. ಅದಕ್ಕೆ ನಾನು ಅವಕಾಶ ನೀಡೋಲ್ಲ ಎಂದು ರಾಜ್ಯ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

ನಗರದ ಕೇಂದ್ರ ಬಸ್ ನಿಲ್ದಾಣದ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಮ್ಮ ಚಾಲಕ ಹಾಗೂ ನಿರ್ವಾಹಕರೇ ಬಸ್ಸುಗಳಿಗೆ ಕಲ್ಲು ಎಸೆದಿದ್ದು ನನಗೆ ತೀವ್ರ ಬೇಸರವಾಗಿದೆ. ಹಾಗಂತ, ಸಾರಿಗೆ ನೌಕರರು ಪ್ರತಿಭಟನೆ ನಡೆಸಿದ್ದು ತಪ್ಪಲ್ಲ. ಆದರೆ, ಪ್ರತಿಭಟನೆ ನಡೆಸಿದ ಸಂದರ್ಭ ಸರಿಯಲ್ಲ. ಅನ್ನ ನೀಡಿದ ಬಸ್ಸುಗಳಿಗೆ ಕಲ್ಲು ಎಸೆದಿದ್ದು ಸರಿಯಲ್ಲ. ಎಂದು ಹೇಳಿದರು.

Related