ರಾಜ್ಯದಲ್ಲಿ ಕೊರೋನಾ ಬಂದಿಲ್ಲ: ಸಿಎಂ

ರಾಜ್ಯದಲ್ಲಿ ಕೊರೋನಾ ಬಂದಿಲ್ಲ: ಸಿಎಂ

ಬೆಂಗಳೂರು, ಮಾ. 04: ಕೆಲವು ದಿನಗಳಿಂದ ದೇಶ ವಿದೇಶದಲ್ಲಿ ಕೊರೋನಾ ವೈರಸ್ ನಿಂದ ಜನರ ಜೀವನ ಅಲ್ಲೋಲಕಲ್ಲೋಲವಾಗಿದೆ. ಕೊರೋನಾ ವೈರಸ್ ಈಗ ಕರ್ನಾಟಕ ರಾಜ್ಯದಲ್ಲೂ ಸಹ ಬಂದಿದೆ ಎಂಬ ಗಾಳಿ ಸುದ್ದುಯೊಂದು ಹೊರಬಿದ್ದಿದೆ ಇದನ್ನು ಯಾರು ನಂಬಬೇಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ರಾಜ್ಯದ ಜನರು ಯಾವುದೇ ಆತಂಕ ಪಡಬೇಡಿ. ರಾಜ್ಯದಲ್ಲಿ ಯಾವುದೇ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿಲ್ಲ. ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಕೊರೋನಾ ವೈರಸ್ ಬಗ್ಗೆ ವೈದ್ಯಕೀಯ ಇಲಾಖೆ ನಿರಂತರವಾಗಿ ತಪಾಸಣೇ, ಮುಂಜಾಗ್ರತಾ ಕ್ರಮಗಳನ್ನು ವಹಿಸಿದೆ. ಈ ಬಗ್ಗೆ ಆರೋಗ್ಯ ಸಚಿವರೊಂದಿಗೂ ಚರ್ಚೆ ನಡೆಸಲಾಗಿದೆ. ಹೀಗಾಗಿಯ ರಾಜ್ಯದ ಜನತೆ ಯಾವುದೇ ಆತಂಕ ಪಡಬಾರದು ಎಂಬುದಾಗಿ ಹೇಳಿದರು.

 

Related