ನೀಲಕಂಠೇಶ್ವರ ಕಾರ್ತಿಕೋತ್ಸವ ಸಂಭ್ರಮ

ನೀಲಕಂಠೇಶ್ವರ ಕಾರ್ತಿಕೋತ್ಸವ ಸಂಭ್ರಮ

ಗುಳೇದಗುಡ್ಡ : ಪಟ್ಟಣದ ಕುರುಹಿನಶೆಟ್ಟಿ ಸಮಾಜದ ಕೆಳಗಿನಪೇಟೆ ಶ್ರೀ ನೀಲಕಂಠೇಶ್ವರ ದೇವಸ್ಥಾನದ ಕಾರ್ತಿಕೋತ್ಸವ ಸಂಭ್ರಮದಿAದ ಜರುಗಿತು.
ಕಾರ್ತಿಕೋತ್ಸವದ ನಿಮಿತ್ಯ ನೀಲಕಂಠೇಶ್ವರ ದೇವರಿಗೆ ರುದ್ರಾಭಿಷಕ ಸೇರಿದಂತೆ ಧಾರ್ಮಿಕ ಕಾರ್ಯಗಳು ನಡೆದವು. ಕುರುಹಿನಶೆಟ್ಟಿ ನೇಕಾರ ಗುರುಪೀಠದ ಜಗದ್ಗುರು ಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನೀಲಕಂಠಮಠದ ಮಹೇಶ್ವರಸ್ವಾಮಿ ಅವರು, ಸಾನಿಧ್ಯವಹಿಸಿದ್ದರು. ಸಹಸ್ರಾರು ದೀಪಗಳನ್ನು ಕಾರ್ತಿಕೋತ್ಸವ ನಿಮಿತ್ತ ಬೆಳಗಿಸಲಾಯಿತು. ನೀಲಕಂಠೇಶ್ವರನಿಗೆ ಮಹಾಮಂಗಳಾರತಿ ನಡೆಯಿತು. ಭಕ್ತರು ಜೈಘೋಷ ಕೂಗುತ್ತ ಕಾರ್ತಿಕೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ತಿರುಗುಣೆಪ್ಪ ಗಾಳಿ, ವೀರಣ್ಣ ಕುರಹಟ್ಟಿ, ಸಿದ್ರಾಮಪ್ಪ ಹನಮಸಾಗರ, ಮಹಾಗುಂಡಪ್ಪ ಅರಕಾಲಚಿಟ್ಟಿ ಮಳಿಯಪ್ಪ ಸುರಪುರ, ಮಹಾಗುಂಡಪ್ಪ ಹನಮಸಾಗರ, ಸಂತೋಷ ನೇಮತಿ, ಶರಣಪ್ಪ ಬೆಕಿನಾಳ, ಚಿಣ್ಣಪ್ಪ ಬೆಕಿನಾಳ, ಈರಪ್ಪ ಗಡ್ಡಿ, ಈರಣ್ಣ ಯಲಬುರ್ಗಿ, ವಿಜಯಕುಮಾರ ಬೇಟಗೇರಿ, ಶಂಕರಪ್ಪ ಬಿಳಗಿ, ಸೇರಿದಂತೆ ಇತರರು ಇದ್ದರು.

Related