ಸಿಎಂಗೆ ಪತ್ರ ಬರೆದ ಶಾಸಕ ನಡಹಳ್ಳಿ

ಸಿಎಂಗೆ ಪತ್ರ ಬರೆದ ಶಾಸಕ ನಡಹಳ್ಳಿ

ಮುದ್ದೇಬಿಹಾಳ : ಗೋವಾ,ಮಹಾರಾಷ್ಟ್ರ ಹಾಗೂ ಕೇರಳದ ವಿವಿಧ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಸುಮಾರು 8-10 ಸಾವಿರ ಜನ ಮತಕ್ಷೇತ್ರದ ಕೂಲಿ ಕಾರ್ಮಿಕರನ್ನು ಸಂಪೂರ್ಣ ಆರೋಗ್ಯ ತಪಾಸಣೆ ನಂತರ ಮರಳಿ ಅವರವರ ಸ್ವಂತ ಗ್ರಾಮಗಳಿಗೆ ತೆರಳಲು ಉಚಿತ ಸಾರಿಗೆ ವ್ಯವಸ್ಥೆ ಒದಗಿಸುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ.

ಈ ಕುರಿತು ಸಿಎಂಗೆ ಬರೆದಿರುವ ಪತ್ರದಲ್ಲಿ ದೇಶದಲ್ಲಿ ಕೋವಿಡ್-19 ಕರೊನಾ ವೈರಸ್‍ದಿಂದ ದೇಶಾದ್ಯಂತ ಲಾಕ್‍ಡೌನ್ ಆಗಿದ್ದು ಈ ಸಮಯದಲ್ಲಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರು ದೇಶದ ಇನ್ನಿತರ ರಾಜ್ಯಗಳಾದ ಕೇರಳ,ಮಹಾರಾಷ್ಟ್ರ,ಗೋವಾದಲ್ಲಿ ವಾಸವಾಗಿದ್ದಾರೆ.

ಕಳೆದ ಒಂದೂವರೆ ತಿಂಗಳಿನಿಂದ ಲಾಕ್‍ಡೌನದಿಂದ ದಿನಂಪ್ರತಿ ಆಹಾರ ಕೊರತೆಯಿಂದ ಬಳಲುತ್ತಿದ್ದು ಸ್ಥಳೀಯ ಶಾಸಕನಾದ ನನಗೆ ದೂರವಾಣಿ ಕರೆಗಳು,ವಾಟ್ಸಾಪ್ ,ಮೇಲ್‍ಗಳಿಗೆ ಫೋಟೋ ಕಳುಹಿಸುತ್ತಿದ್ದು ಕೂಡಲೇ ಅಂತರಾಜ್ಯ ಕಾರ್ಮಿಕರ ಸಂಚಾರಕ್ಕೆ ಅನುಮತಿ ನೀಡಬೇಕು ಎಂದು ಸಿಎಂಗೆ ಶಾಸಕ ನಡಹಳ್ಳಿ ವಿನಂತಿಸಿದ್ದಾರೆ.

Related