ಕಾರಿನಲ್ಲೇ ವ್ಯಕ್ತಿಯ ಕೊಲೆ

ಕಾರಿನಲ್ಲೇ ವ್ಯಕ್ತಿಯ ಕೊಲೆ

ತುಮಕೂರು : ಕಾರಿನಲ್ಲೇ ಓರ್ವ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

ಬೆಂಗಳೂರು ಮೂಲದ ನಿಸ್ಸಾರ್ ಅಹಮದ್(40) ಕೊಲೆಯಾದ ವ್ಯಕ್ತಿಯಾಗಿದ್ದು, ಕಾರಿನ ಡ್ರೈವಿಂಗ್ ಸೀಟಿನಲ್ಲೇ ಮೃತನ ಶವ ಪತ್ತೆಯಾಗಿದೆ. ತಡರಾತ್ರಿ ವ್ಯಕ್ತಿಯ ಎದೆ, ತಲೆ, ಕುತ್ತಿಗೆ ಭಾಗಕ್ಕೆ ಇರಿದು ದುಷ್ಕರ್ಮಿಗಳು ಕಾರು ಬಿಟ್ಟು ಹೋಗಿದ್ದಾರೆ. ಬೆಳಗ್ಗೆ ಗ್ರಾಮಸ್ಥರು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ.

ಕೊರಟಗೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Related