ಕೊಲೆಮಾಡಿಸಿದ್ದ `ಚಾರ್ಜರ್’

ಕೊಲೆಮಾಡಿಸಿದ್ದ `ಚಾರ್ಜರ್’

ಬೆಂಗಳೂರು: ಮಧ್ಯಪ್ರದೇಶದ ಯುವಕರು ನಗರದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದು, ಮೊಬೈಲ್ ಚಾರ್ಜಿಂಗ್ ಹಾಕುವ ವಿಚಾರಕ್ಕೆ ಜಗಳ ಮಾಡಿಕೊಂಡು ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ಜು.೨೮ ರಂದು ರಾಜಾಜಿನಗರದಲ್ಲಿ ನಡೆದಿದೆ, ಅನಿಲ್ ಕೊಲೆಯಾದ ಯುವಕನಾಗಿದ್ದು, ಆಕಾಶ್ ಬಂಧಿತ ಆರೋಪಿಯಾಗಿದ್ದಾನೆ. ಎಂದು ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ. ನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದು. ಇವರಿಬ್ಬರೂ ಕಂಠಪೂರ್ತಿ ಕುಡಿದು ಚಾರ್ಜಿಂಗ್ ಹಾಕುವ ವಿಚಾರದಲ್ಲಿ ಆರೋಪಿ ಆಕಾಶ್, ಪಕ್ಕದಲ್ಲೇ ಇದ್ದ ಸೌದೆಯಿಂದ ಅನಿಲ್ ತಲೆಗೆ ಹೊಡೆದಿದ್ದಾನೆ. ಕೂಡಲೇ ಆತನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತ್ತು. ಚಿಕಿತ್ಸೆ ಫಲಕಾರಿಯಾಗದೆ, ನಿನ್ನೆ ಸಾವನ್ನಪ್ಪಿದ್ದಾರೆ. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದ ರಾಜಾಜಿನಗರ ಠಾಣೆ ಪೊಲೀಸರು ಆರೋಪಿ ಆಕಾಶ್‌ನನ್ನು ಬಂಧಿಸಿದ್ದಾರೆ.

Related