ಕೊಲೆ ಪ್ರಕರಣ: ಐವರ ಬಂಧನ

ಕೊಲೆ ಪ್ರಕರಣ: ಐವರ ಬಂಧನ

ಗಂಗಾವತಿ : ಹದಿನೈದು ವರ್ಷಗಳ ಹಿಂದೆ ನಡೆದಿದ್ದ ಪಂಪಾಪತಿ ಅಲಿಯಾಸ್ ಶಂಕರ್ ಸಿಂಗ್ ಕೊಲೆಗೆ ಸಂಬಂಧಿಸಿದಂತೆ ಪತ್ನಿ ಲಕ್ಷ್ಮಿ ಸಿಂಗ್ ಆಕೆಯ ಸಹಚರರಾದ ಅಮ್ಜದ್ ಖಾನ್, ಅಬ್ದುಲ್ ಹಫೀಜಾ, ಬಾಬಾ ಜಾಕಿರ್ ಬಾಷಾ, ಶಿವನಗೌಡ ಇವರೆಲ್ಲರನ್ನೂ ಬಂಧಿಸಿದ್ದಾರೆ.

ಹದಿನೈದು ವರ್ಷದ ಹಿಂದಿನ ಕೊಲೆಗೆ ಕೊಲೆಯ ಪ್ರಕರಣದ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತರವರು ವಿಶೇಷ ತನಿಖಾ ತಂಡ ರಚಿಸಿದ್ದರು. ಎಸ್ಪಿ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ್, ವಿಶೇಷ ತಂಡದ ಸದಸ್ಯ ವೆಂಕಟಸ್ವಾಮಿ ಇವರನ್ನೊಳಗೊಂಡ ತಂಡ ವೃತ್ತಿಪರವಾಗಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

2005 ನೇ ಇಸವಿಯಲ್ಲಿ ಲಕ್ಷ್ಮಿ ಸಿಂಗ್ ತನ್ನ ಸಹಚರರೊಂದಿಗೆ ಸೇರಿಕೊಂಡು ಶಂಕರ್‌ಸಿAಗ್ ಅದನ್ನು ಕೊಲೆ ಮಾಡಿ ಶವವನ್ನು ಮನೆಯಲ್ಲಿ ಹೂತು ಹಾಕಿದ್ದು,  ನಂತರ 2015ರಲ್ಲಿ ಶವವು ಅಸ್ತಿಪಂಜರದ ಸ್ಥಿತಿಯಲ್ಲಿ ಸಿಕ್ಕಿದ್ದು, ಇದನ್ನು ಟೀಶರ್ಟ್ನೊಂದಿಗೆ ನಾನು ಗುರುತಿಸಿದ್ದು, ಸದರಿ ಶವದ ಕಳೆ ಬರಹವನ್ನು ಶಿವನಗೌಡ ಅವರೊಂದಿಗೆ ಹೊಸಪೇಟೆ ಊರ ಹೊರಗಿನ ಜಾಗದಲ್ಲಿ ಸುಟ್ಟು ಹಾಕಿರುತ್ತಾರೆ. ನನ್ನ ತಂದೆಯನ್ನು ಸಾಯಿಸಿ ಸುಟ್ಟು ಹಾಕಿದವರ ವಿರುದ್ಧ ಕಾನೂನು ಕ್ರಮ ಜರುಗಿಸಿ ನಮಗೆ ರಕ್ಷಣೆ ನೀಡುವಂತೆ ಆರೋಪಿ ಲಕ್ಷ್ಮಿಸಿಂಗ್ ಮಗಳಾದ ವಿದ್ಯಾಸಿಂಗ್ ನಗರ ಪೊಲೀಸ್ ಠಾಣೆ ಗುನ್ನೆ ನಂಬರ್ 90 / 2020 ರಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related