ಮುನಿರತ್ನ ಸಚಿವರಾಗುವುದು ಪಕ್ಕಾ : ಎಂಟಿಬಿ

ಮುನಿರತ್ನ ಸಚಿವರಾಗುವುದು ಪಕ್ಕಾ : ಎಂಟಿಬಿ

ತುಮಕೂರು : ಪಕ್ಷದಲ್ಲಿ ಬುಗೆಲೆದ್ದಿರುವ ಅಸಮಾದಾನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಮನಗೊಳಿಸಿ ಸಮರ್ಥವಾಗಿ ನಿಭಾಯಿಸಲಿದ್ದಾರೆ ಎಂದು ನೂತನ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.

ಶ್ರೀ ನಿರಂಜನಾಂದ  ಪುರಿ ಮಹಾ ಸ್ವಾಮಿಗಳು ಕಾಗಿನೆಲೇ ಇವರ ನೇತೃತ್ವದಲ್ಲಿ ಕರ್ನಾಟಕ ಕುರುಬ ಸಂಘದ ಸಹಯೋಗದಲ್ಲಿ ಆರಂಭವಾಗುವ ಪಾದಯಾತ್ರೆಯಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ತುಮಕೂರಿಗೆ ಆಗಮಿಸಿ ಮಾತನಾಡಿದರು.

ಒಂದು ತಿಂಗಳ ನಂತರ ಆರ್.ಆರ್ ನಗರದ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಮುನಿರತ್ನ ಅವರು, ಇನ್ನು ಒಂದು ತಿಂಗಳ ನಂತರ ಸಚಿವರಾಗೋದು ಪಕ್ಕ ಇದರ ಬಗ್ಗೆ ಅನುಮಾನಗಳು ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನನಗೆ ಸಚಿವ ಸಂಪುಟದಲ್ಲಿ ಯಾವ ಸಚಿವ ಸ್ಥಾನವನ್ನು ನೀಡಿದರು ಕೆಲಸ ಮಾಡುತ್ತೇನೆ, ನನಗೆ ಉತ್ತಮ ಖಾತೆಯನ್ನು ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಅವರು ಹಾಗೂ ಹೈಕಮಾಂಡ್ ನೀಡಲಿದೆ ಎಂದರು.

ಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟಕ್ಕೆ ಹಾಗೂ ಪಾದಯಾತ್ರೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಬೆಂಬಲ ಇದೆ ನಮ್ಮ ಈ ಹೋರಾಟಕ್ಕೆ ಜಯಸಿಗಲಿ ಎಂದು ಈ ಹೋರಾಟಕ್ಕೆ ಸಿಗಲಿದೆ ಎಂದು ಎಂ.ಟಿ.ಬಿ ನಾಗರಾಜ್ ತಿಳಿಸಿದರು.

Related