ಮುದ್ದೇಬಿಹಾಳ : ಎಲ್ಲೆಡೆ ಕೊರೊನಾ ಹರಡವಿಕೆ ತಡೆಗಟ್ಟಲು ಲಾಕ್ಡೌನ್ ಜಾರಿಗೊಳಿಸಲಾಗಿದ್ದರೂ ಅದನ್ನು ಉಲ್ಲಂಘಿಸಿ ಪಟ್ಟಣದ ಎರಡ್ಮೂರು ಸ್ಥಳಗಳಲ್ಲಿ ತರಕಾರಿ,ಹಣ್ಣು ವ್ಯಾಪಾರ ಮಾಡುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.
ಪಟ್ಟಣದ ಬಿಇಓ ಕಛೇರಿ ಎದುರುಗಡೆ, ವಿಡಿಸಿಸಿ ಬ್ಯಾಂಕ್ ಪಕ್ಕದಲ್ಲಿ ಹಾಗೂ ತಂಗಡಗಿ ರಸ್ತೆಯಲ್ಲಿ ವ್ಯಾಪಾರ ಮಾಡಲು ಮುಂದಾಗಿದ್ದವರಿಗೆ ಪಿಎಸೈ ಮಲ್ಲಪ್ಪ ಮಡ್ಡಿ ಹಾಗೂ ಸಿಬ್ಬಂದಿ ಬಿಸಿ ಮುಟ್ಟಿಸಿದರು.
ಪೊಲೀಸರನ್ನು ನೋಡುತ್ತಲೇ ವ್ಯಾಪಾರಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಆದರೂ ಕೆಲವರು ತಮ್ಮ ಚಾಳಿ ಬಿಡದೇ ಪೊಲೀಸರು ಅತ್ತ ಮುಂದೆ ಹೋಗುತ್ತಿದ್ದಂತೆ ಮತ್ತೆ ಗುಂಪುಗೂಡಿ ವ್ಯಾಪಾರ ಮಾಡುತ್ತಿದ್ದರು.