ಮೋದಿ ಉತ್ಸಾಹ ಹೊಂದಿದ ಯುವಕ

ಮೋದಿ ಉತ್ಸಾಹ ಹೊಂದಿದ ಯುವಕ

ಗಂಗಾವತಿ ; ದೇಶಕ್ಕೆ ಪ್ರಧಾನಿ ಮೋದಿ ಗಂಗಾವತಿ ತಾಲೂಕಿನ ಹೇರೂರು ಜಿ.ಪಂಗೆ ಹೇರೂರು ಮೋದಿ ಎಂದೇ ಪ್ರಚಲಿತ ಹೊಂದಿರುವ ಯುವಕ ವೆಂಕಾರೆಡ್ಡಿ, ಮುಂಬರುವ ಜಿಲ್ಲಾ ಹಾಗೂ ತಾ.ಪಂಗಳ ಮೀಸಲಾತಿ ಪ್ರಕಟಗೊಳ್ಳುವ ಮೊದಲೇ, ಬಿರುಸಿನ ಪ್ರಚಾರಕ್ಕೆ ಸಜ್ಜಾಗಿದ್ದಾನೆ.

ಈಗಾಗಲೇ ಜಿ.ಪಂ ವ್ಯಾಪ್ತಿಯ ಹಣವಾಳ, ಹೇರೂರು, ಕೇಸರಹಟ್ಟಿ, ವಡ್ಡರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಉದ್ಯೋಗ ಖಾತ್ರಿ ಫಲಾನುಭವಿಗಳು ಕೆಲಸ ಮಾಡುವ ಜಾಗದಲ್ಲಿ ಹೋಗಿ, ಅವರ ಜೊತೆಗೆ ಕೆಲಸ ಮಾಡುತ್ತಾನೆ, ಅವರಿಗೆ ಸಾವಿರಾರು ರೂ. ಖರ್ಚು ಮಾಡಿ ಊಟ ಮಾಡಿಸುತ್ತಾನೆ. ಗ್ರಾಮೀಣ ಯುವಕರಲ್ಲಿ ರಾಜಕೀಯ ಪ್ರಜ್ಞೆ ಬೆಳೆಸುತ್ತಿದ್ದಾರೆ. ಹೇರೂರು ಗ್ರಾಮದಲ್ಲಿ ಬಿಜೆಪಿ ಕಚೇರಿ ತೆಗೆದಿದ್ದಾನೆ. ಪ್ರತಿಯೊಂದು ರಂಗದಲ್ಲಿ ವೆಂಕಾರೆಡ್ಡಿ ತುಂಬಾ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾನೆ.

ವೆಂಕಾರೆಡ್ಡಿ ಎಂಬ ಯುವಕ ಶ್ರೀಮಂತ ವ್ಯಕ್ತಿಯಲ್ಲ. ಆತನು ಕಡು ಬಡವ ಮೋದಿ ಅವರ ಮೇಲಿನ ಅಭಿಮಾನದಿಂದ, ಸ್ವಂತ ದುಡಿಮೆಯ ದುಡ್ಡಿನಲ್ಲಿ ತನ್ನ ಕೈಲಾದ ಮಟ್ಟಿಗೆ ಸಮಾಜಮುಖಿ ಸೇವೆಯಲ್ಲಿ ತೊಡಗಿದ್ದಾರೆ. ಅತ್ಯಂತ ಉತ್ಸಾಹ ಇರುವ ಈ ಹುಡುಗನನ್ನು ನೋಡಿದ ಗ್ರಾಮೀಣ ಮುಗ್ಧ ಜನರು ಇಂತಹ ಯುವಕರು ರಾಜಕೀಯ ರಂಗದಲ್ಲಿ ಮುಂದೆ ಬರಬೇಕೆಂದು ಹಾರೈಸುತ್ತಿದ್ದಾರೆ.

Related