ಮೈಸೂರು: ಹಾಡಿಯ ಮಹಿಳೆಯರ ಜೊತೆ ಸಚಿವ ನಾಗೆಂದ್ರ ಸಂವಾದ ನಡೆಸಿದರು ಈ ವೇಳೆ ಮಹಿಳೆಯರು ಹಲವು ಸಮಸ್ಯೆಗಳನ್ನ ಸಚಿವರ ಮುಂದೆ ಬಿಚ್ಚಿಟ್ಟರು. ದಶಕಗಳಿಂದ ಕಾಡಿನಲ್ಲಿದ್ದು ಮೂಲಭೂತ ಸೌಖರ್ಯ ವಂಚಿತರಾಗಿದ್ದೇವೆ ಮನೆ, ನೀರು, ಶಾಲೆಗಳಿಲ್ಲ.
ಪೂರ್ವಿಕರ ಕಾಲದಿಂದ ಉಳುಮೆಮಾಡಿಕೊಂಡು ಬಂದ ಜಮೀನಿಗೆ ಹಕ್ಕು ಪತ್ರ ಗಳನ್ನ ನೀಡಿಲ್ಲ ದಯಮಾಡಿ ಹಕ್ಕು ಪತ್ರ ಕೊಡಿಸಿಕೊಡಿ ಎಂದು ಮನವಿ ಮಾಡಿದರು.
ಇನ್ನು ಕೆಲವರು ನಮ್ಮ ಬಳಿ ಅಧಾರ್ ಕಾರ್ಡ್ ಗಳೆ ಇಲ್ಲ ಅಂತ ಸಚಿವರ ಗಮನ ಸೆಳೆದಾಗ ನಾಳೆಯಿಂದಲೇ ಅಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಡ್ರೈವ್ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ನಾಳೆ ಪ್ರತಿ ಮನೆಗೂ ಬೇಟಿ ನೀಡಿ ಸಮಸ್ಯೆ ಅಲಿಸುವುದಾಗಿ ತಿಳಿಸಿದರು.