ಮತಕ್ಕಾಗಿ ವಲಸಿಗರಿಗೆ ಗಾಳ

ಮತಕ್ಕಾಗಿ ವಲಸಿಗರಿಗೆ ಗಾಳ

ಬಾಗಲಕೋಟೆ : ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ, ಬಾದಾಮಿ, ಹುನಾಗುಂದ ಮತ್ತು ಗುಳೇದಗುಡ್ಡದ ಬಸ್ ನಿಲ್ದಾಣಗಳು ಸಾವಿರಾರು ವಲಸಿಗರಿಂದ ತುಂಬಿದ್ದವು.

ಅವರೆಲ್ಲಾ ತಮ್ಮ ಮನೆಗಳಿಗೆ ವಾಪಸಾಗಿದ್ದದ್ದು ತುಂಬಾ ವಿಶೇಷ ಕಾರಣಕ್ಕೆ, ಏಕೆಂದರೆ ಭಾನುವಾರ ನಡೆದ ಗ್ರಾ.ಪಂ ಚುನಾವಣೆಯಲ್ಲಿ ತಮ್ಮ ಅತ್ಯಮೂಲ್ಯವಾದ ಮತ ಚಲಾಯಿಸಲು ಬಸ್‌ಗಳ ಮೂಲಕ ಸ್ವಗ್ರಾಮಕ್ಕೆ ಆಗಮಿಸಿದ್ದರು.

ಮಂಗಳೂರು ಬಂದರಿನಲ್ಲಿ ಕೆಲಸ ಮಾಡುವ ಗುಳೇದಗುಡ್ಡದ ಸುಭಾಷ್ ಎಂಬಾತ, ಒಬ್ಬ ಅಭ್ಯರ್ಥಿ ನಮ್ಮ ಜೊತೆ ಮಾತನಾಡಿ ನಾವು ಬರಲು ಐಷರಾಮಿ ಹವಾ ನಿಯಂತ್ರಿತ ಬಸ್ ವ್ಯವಸ್ಥೆ ಮಾಡಿದ್ದರು, ನಾವು ಒಂದೇ ಗ್ರಾಮದ 60 ಮಂದಿ ಮಂಗಳೂರಿನಿಂದ  ಬಂದು ಮತ ಚಲಾಯಿಸಿದೆವು ಎಂದು ಹೇಳಿದರು.

Related