ಮಾಂಸ ಖಾದ್ಯ ಮಳಿಗೆ ಉದ್ಘಾಟಿಸಿದ ಶೆಟ್ಟರ್..!

ಮಾಂಸ ಖಾದ್ಯ ಮಳಿಗೆ ಉದ್ಘಾಟಿಸಿದ ಶೆಟ್ಟರ್..!

ಹುಬ್ಬಳ್ಳಿ, ಫೆ.16 : ರಾಜ್ಯ ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಂಡಿರುವ ಹಿಂದುಳಿದ ವರ್ಗದ ಪ.ಜಾತಿ, ಪ. ಪಂಗಡದ ಫಲಾನುಭವಿಗಳಿಗೆ ಕೊಡ ಮಾಡುವ ಮಾಂಸ ಮತ್ತು ಮಾಂಸದಿಂದ ತಯಾರಿಸಿದ ಖಾದ್ಯ ಪದಾರ್ಥಗಳ ಸಂಚಾರಿ ಮಾರಾಟ ಮಳಿಗೆ ಹುಬ್ಬಳ್ಳಿಯಲ್ಲಿ ಸಚಿವ ಜಗದೀಶ್ ಶೆಟ್ಟರ್ ಉದ್ಘಾಟಿಸಿದರು.
11ಲಕ್ಷ 50 ಸಾವಿರ ರೂಪಾಯಿ ಹಣದಲ್ಲಿ ನಿರ್ಮಾಣವಾದ ಈ ವಾಹನಕ್ಕೆ ರಾಜ್ಯ ಸರ್ಕಾರದಿಂದ 8 ಲಕ್ಷ 25 ಸಾವಿರ ರೂಪಾಯಿ ಸಹಾಯಧನವಾಗಿ ನೀಡಲಾಗುತ್ತದೆ. ಉಳಿದ 2 ಲಕ್ಷ 25 ಸಾವಿರ ರೂಪಾಯಿ ಹಣವನ್ನು ಬ್ಯಾಂಕ್ ಲೋನ್ ಮಾಡುವ ಮೂಲಕ ಫಲಾನುಭವಿಗಳು ಪಾವತಿಸಬೇಕು ಎಂದು ಸೂಚನೆ ನೀಡಲಾಗಿದೆ.

Related