ಸಾರ್ವಜನಿಕ ಗ್ರಂಥಾಲಯ ನಿರ್ಮಾಣಕ್ಕೆ ಬೃಹತ್ ಪ್ರತಿಭಟನೆ

ಸಾರ್ವಜನಿಕ ಗ್ರಂಥಾಲಯ ನಿರ್ಮಾಣಕ್ಕೆ ಬೃಹತ್ ಪ್ರತಿಭಟನೆ

ಜೇವರ್ಗಿ : ಪಟ್ಟಣದಲ್ಲಿ ಹತ್ತು-ಹನ್ನೇರಡು ಕಾಲೇಜುಗಳು ಅಸ್ತಿತ್ವದಲ್ಲಿದ್ದು, ಸಾವಿರಾರು ವಿದ್ಯಾರ್ಥಿಗಳು ಪಟ್ಟಣಕ್ಕೆ ಗ್ರಾಮೀಣ ಪ್ರದೇಶದಿಂದ ಆಗಮಿಸುತ್ತಿದ್ದಾರೆ.  ಅಧ್ಯಯನಕ್ಕೆ ಅನುಕೂಲವಾಗಲು ವಿಜಯಪೂರ ವೃತ್ತದ ಬಳಿ ಸಾರ್ವಜನಿಕ ಗ್ರಂಥಾಲಯ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ, ಯುವಜನ ಜಾಗೃತಿ ವೇದಿಕೆ (ರಿ) ಸಾರಥ್ಯದಲ್ಲಿ ಸಾವಿರಾರು ವಿದ್ಯಾರ್ಥಿಗಳು  ಬಿದಿಗಿಳಿದು ಹೋರಾಟ ಮಾಡಿದರು.

ಪಟ್ಟಣದಲ್ಲಿ ಬುಧವಾರ ಬೆಳಿಗ್ಗೆ ೧೧.೩೦ಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಿಂದ ಹೊರಟ ಬೃಹತ್ ಸಂಖ್ಯೆಯ ಪ್ರತಿಭಟನಾ ವಿದ್ಯಾರ್ಥಿಗಳು ಅಖಂಡೇಶ್ವರ ವೃತ್ತದ ಮೂಲಕ, ಮಿನಿ ವಿಧಾನ ಸೌಧಕ್ಕೆ ತೆರಳಿ ಮುಖ್ಯಮಂತ್ರಿಗಳಿಗೆ ತಹಶೀಲ್ದಾರ್ ಸಿದ್ಧರಾಯ ಭೋಸಗಿರವರ ಮೂಲಕ ಮನವಿ ಪತ್ರವನ್ನು ಸಲ್ಲಿಸಿದರು.

ಈಗಾಗಲೇ ಇರುವ ಸಾರ್ವಜನಿಕ ಗ್ರಂಥಾಲಯವು ಹಳೆಯ ತಹಶೀಲ್ದಾರ್ ಕಟ್ಟಡದಲ್ಲಿದ್ದು ಸಂಪೂರ್ಣ ಶಿಥಲಾವಸ್ಥೆಯಿಂದ ಕೂಡಿದೆ. ಯಾವ ಸಂದರ್ಭದಲ್ಲಿ ಪ್ರಾಣ ಹಾನಿಯಾಗುತ್ತೋ ಗೊತ್ತಿಲ್ಲ, ಆದ್ದರಿಂದ ಈ ಕೂಡಲೇ ವಿಜಯಪೂರ ವೃತ್ತದ ಬಳಿ ಇರುವ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸುಸಜ್ಜಿತವಾದ ಕಟ್ಟಡದೊಂದಿಗೆ ಸಾರ್ವಜನಿಕ ಗ್ರಂಥಾಲಯ ನಿರ್ಮಾಣ ಆವಗಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಾರ್ವಜನಿಕ ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಯುಗ ಇರುವದರಿಂದ ಎಲ್ಲಾ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಐಎಎಸ್, ಐಪಿಎಸ್, ಕೆಎಎಸ್, ಕೆಇಎಸ್ ನಂತಹ ಪರೀಕ್ಷೆಗಳಿಗೆ ಅನುಕೂಲವಾಗುವ ಪಠ್ಯ ಪುಸ್ತಕಗಳನ್ನು ಸರ್ಕಾರ ಶೇ ೮೦ರಷ್ಟು ಪ್ರತಿಶತದಲ್ಲಿ ಖರಿದಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ಭಾಗದ ನೂರಾರು ವಿದ್ಯಾರ್ಥಿಗಳು ಅತ್ಯುನ್ನತ ಹುದ್ದೆ ಅಲಂಕರಿಸುವಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರಿದ ಜವಬ್ದಾಯಾಗಿದೆ ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಆಗ್ರಹಿಸಿದರು.

ಈಗಾಗಲೇ ನೂತನವಾಗಿ ೯ ಗ್ರಾ.ಪಂ ಹೆಚ್ಚಾಗಿವೆ, ಆಯಾ ಗ್ರಾ.ಪಂ ಗ್ರಂಥಾಲಯಗಳು ನಿರ್ಮಾಣಮಾಡಬೇಕು ಮತ್ತು ಗ್ರಂಥ ಪಾಲಕರನ್ನು ನೇಮಕ ಮಾಡಿಕೊಳ್ಳಬೇಕು ಸೇರಿದಂತೆ ಹಲವರು ಬೇಡಿಕೆಗಳನ್ನು ಈಡೇರಿಸಬೇಕೆಂದು ಯುವಜನ ಜಾಗೃತಿ ವೇದಿಕೆ ಮೂಲಕ ವಿದ್ಯಾರ್ಥಿಗಳು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಅನೀಲಕುಮಾರ ಹಾಲಕಾಯಿ, ಅಧ್ಯಕ್ಷರಾದ ಸಿದ್ದು ಅಂಕುಶದೊಡ್ಡಿ ಪ್ರ.ಕಾರ್ಯದರ್ಶಿ ಸುರೇಶಕುಮಾರ ಹಿರೇಮಠ, ಕಾರ್ಯದರ್ಶಿ ಶಿವಲಿಂಗ ಹಳ್ಳಿ, ಖಜಾಂಚಿ ರುದ್ರಗೌಡ ಪಾಟೀಲ, ಸದಸ್ಯರಾದ ನಿಂಗಣ್ಣಗೌಡ ಸಾಥಖೇಡ, ರಾಜಶೇಖರ ಜೈನಾಪೂರ, ರಮೇಶ ಪತ್ತಾರ, ಸಿದ್ದುಸಾಹು ಹಾಲಗಡ್ಲಾ ಮಲ್ಲಿಕಾರ್ಜುನ ಜೈನಾಪೂರ, ಸಿದ್ದಾರ್ಥ ಪಾಟೀಲ, ಬಸವಂತ್ರಾಯ ಮರೆಪ್ಪಗೋಳ, ಅಣವೀರಪ್ಪ ಮರೇಪ್ಪಗೋಳ ಪ್ರಶಾಂತ ಪಾಟೀಲ ಜೈನಾಪೂರ, ದಸಂಸ ಮುಖಂಡರಾದ ಸಿದ್ರಾಮ ಕಟ್ಟಿ ಕೋಳಕೂರ, ಮಲ್ಲಿಕಾರ್ಜುನ ಬಿಲ್ಲಾರ, ಶಿವು ಹೆಗಡೆ ಸೊನ್ನ, ಮಾಪಣ ಕಟ್ಟಿ, ಮಹೇಶ ಕಟ್ಟಿ ಸಂಗಾವಿ, ಸಂತೋಷ ಕಲ್ಲೂರ ಕೆ ಸೇರಿದಂತ ವಿವಿಧ ಕಾಲೇಜು ವಿದ್ಯಾರ್ಥಿಗಳು, ಸಂಘಟನೆಗಳ ಮುಖಂಡರು ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

Related