ಶಾಸಕರು, ಸಚಿವರ ನಡುವೆ ಮಾರಾಮಾರಿ

ಶಾಸಕರು, ಸಚಿವರ ನಡುವೆ ಮಾರಾಮಾರಿ

ಮಂಡ್ಯ: ಕೊರೋನಾ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯುತ್ತಿದ್ದ ಸಭೆ ವೇಳೆ ಸಚಿವರು ಹಾಗೂ ಶಾಸಕರ ನಡುವೆ ಮಾರಾಮಾರಿ ನಡೆದಿದೆ.

ಸಚಿವ ನಾರಾಯಣ ಗೌಡ ಹಾಗೂ ಶಾಸಕ ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ ನಡುವೆ ಜಗಳ ನಡೆದಿದ್ದು, ಈ ವೇಳೆ ಜಿಲ್ಲಾಧಿಕಾರಿ ಕಚೇರಿ ಆರೋಪ , ಪ್ರತ್ಯಾರೋಪಗಳ ಗೊಂದಲದ ಗೂಡಾಗಿತ್ತು.

ಏಕವಚನ ಹಾಗೂ ಅವಾಚ್ಯ ಶಬ್ದಗಳಿಂದ ಬೈಯ್ದಾಡಿಕೊಂಡ ಸಚಿವರು ಹಾಗೂ ಶಾಸಕರು ಅಧಿಕಾರಿಗಳ ಸಮ್ಮುಖದಲ್ಲಿ ಕೈ ಮಿಲಾಯಿಸಿದ್ದಾರೆ.  ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಪುಟ್ಟರಾಜು ಅವರು ಗಲಾಟೆ ತಿಳಿಗೊಳಿಸಿದರು.

Related