ಗಂಗಾವತಿ : ಕೊಪ್ಪಳ ತಾಲೂಕಿನ ಅರಿಸಿನಕೇರಿ ವಿಧಾನ ಸಭಾ ಕ್ಷೇತ್ರ ಕೊಡದಾಳ ಗ್ರಾಮದವರಿಗೆ ಎಸ್.ಹೆಚ್.ಡಿ.ಪಿ. 4ನೇ ಹಂತದ ಯೋಜನೆಯಡಿಯಲ್ಲಿ ಸುಮಾರು 800 ಲಕ್ಷದ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ಶಾಸಕ ಪರಣ್ಣ ಮುನವಳ್ಳಿ ನೆರವೇರಿಸಿದರು.
ಮಾತನಾಡಿ, ಕಾಮಗಾರಿಯನ್ನು ಯಾವುದೇ ರೀತಿಯಲ್ಲಿ ಕಳಪೆ ಮಟ್ಟದಲ್ಲಿ ಮಾಡಬಾರದು ಗುಣಮಟ್ಟದ ಕಾಮಗಾರಿಯನ್ನು ಮಾಡಬೇಕು ಮತ್ತು ಕೊರೋನಾ ವೈರಸ್ ದೇಶದ್ಯಾಂತ ಇರುವುದರಿಂದ ಕಾಮಗಾರಿಯ ಕೆಲಸವನ್ನು ಮಾಡುವವರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಅಂತರವನ್ನು ಕಾಪಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.