ಲಾರಿ ಡಿಕ್ಕಿ: ಭೀಕರ ಅಪಘಾತ

ಲಾರಿ ಡಿಕ್ಕಿ: ಭೀಕರ ಅಪಘಾತ

ಮಂಡ್ಯ, ಫೆ. 5 : ತುಮಕೂರು-ಮದ್ದೂರು ರಾಜ್ಯ ಹೆದ್ದಾರಿಯಲ್ಲಿ ನಿನ್ನೆ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿ, ಸ್ಥಳದಲ್ಲೇ ಮೂವರು ಯುವಕರು ಸಾವನ್ನಪ್ಪಿದ್ದಾರೆ.
ಪ್ಯಾಸೆಂಜರ್ ಆಟೋಗೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ, ಆಟೋದಲ್ಲಿ ಕುಳಿತಿದ್ದ ಮೂವರು ಯುವಕರು ಸ್ಥಳದಲ್ಲೇ ಅಸುನೀಗಿದ್ದಾರೆ.
ಆಟೋದಲ್ಲಿದ್ದ ದುಂಡನಹಳ್ಳಿ ಗ್ರಾಮದ ಅಭಿ(20) ಮಲ್ಲನಕುಪ್ಪೆ ಗ್ರಾಮದ ಕೃಷ್ಣ(23) ಹಾಗೂ ಚನ್ನಪಟ್ಟಣದ ತಿಟ್ಟಮಾರನಹಳ್ಳಿ ಗ್ರಾಮದ ಪ್ರಶಾಂತ್(21) ಮೃತ ಯುವಕರು.
ಈ ದುರಂತ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ದುಂಡನಹಳ್ಳಿ ಕೆರೆ ಬಳಿ ನಡೆದಿದೆ. ಅಪಘಾತಕ್ಕೊಳಗಾದ ಪ್ಯಾಸೆಂಜರ್ ಆಟೋ ಮದ್ದೂರಿನಿಂದ ತೆರಳುತ್ತಿತ್ತು ಎಂದು ತಿಳಿದು ಬಂದಿದೆ.

Related