ಬದುಕಿದ್ರೆ ಯುಗಾದಿ ಮಾಡಬಹುದು : ಆರ್.ಅಶೋಕ್

ಬದುಕಿದ್ರೆ ಯುಗಾದಿ ಮಾಡಬಹುದು : ಆರ್.ಅಶೋಕ್

ಬೆಂಗಳೂರು, ಮಾ. 24 : ನಾವು ಬದುಕಿದ್ರೆ ಮುಂದಿನ ವರ್ಷವೂ ಹಬ್ಬ ಮಾಡಬಹುದು. ಹಬ್ಬದ ಸಂಭ್ರಮಕ್ಕೆ ಯಾರೂ ನಿಯಮಗಳನ್ನು ಉಲ್ಲಂಘಿಸಿ ಸೋಂಕು ಹರಡಲು ಕಾರಣರಾಗಬೇಡಿ ಎಂದು ಕಂದಾಯ ಸಚಿವ ಆರ್.ಅಶೋಕ್ ಮನವಿ ಮಾಡಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಬ್ಬದ ಸಂಭ್ರಮದ ಬಗ್ಗೆ ನಮಗೆ ಅರಿವಿದೆ. ಆದರೆ, ಪರಿಸ್ಥಿತಿ ಸರಿಯಿಲ್ಲ. ಎಲ್ಲ ಕಡೆ ಸಾಂಕ್ರಾಮಿಕ ರೋಗದ ಭೀತಿ ಆವರಿಸಿದೆ. ನಮ್ಮ ಮನೆಯಲ್ಲೂ ಕೂಡ ಹೆಚ್ಚು ಆಡಂಬರ ಮಾಡದೆ ಹೂವಿಟ್ಟು ಪೂಜೆ ಮಾಡಿ ಸರಳವಾಗಿ ಹಬ್ಬ ಆಚರಿಸುವಂತೆ ಸೂಚಿಸಿದ್ದೇವೆ. ಹಬ್ಬಕ್ಕಾಗಿ ದಿನನಿತ್ಯದ ಸಾಮಾನು ಖರೀದಿಸಲು ಬೀದಿಗೆ ಬಂದು ಜನಜಂಗುಳಿ ಉಂಟುಮಾಡಬೇಡಿ. ಇದರಿಂದ ಬೇರೆಯವರಿಗೂ ತೊಂದರೆಯಾಗಲಿದೆ ಎಂದು ಮನವಿ ಮಾಡಿದರು.

Related