ಹರಪನಹಳ್ಳಿ : ಪ್ರತಿ ವರ್ಷದಂತೆ ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ಅವರು, ಪ್ರತಿಷ್ಠಾನ ಹಾಗೂ ಎಂ.ಪಿ ಲತಾ ಮಲ್ಲಿಕಾರ್ಜುನ್ ಅಭಿಮಾನಿ ಬಳಗದವತಿಯಿಂದ ತಾಲೂಕಿನ ಕಡತಿ ಮತ್ತು ನಂದ್ಯಾಲ ರಸ್ತೆಯ ಮಧ್ಯ ಭಾಗದ ಬಳಿಯಿರುವ ತುಂಗಭದ್ರ ನದಿಯ ದಡದಲ್ಲಿ ಮಕರ ಸಂಕ್ರಾಂತಿ ಔತಣಕೂಟ ಮತ್ತು ಜನಪದ ಸಂಗೀತ ಸಂಕ್ರಾಂತಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಈ ಸಂದರ್ಭದಲ್ಲಿ ಎಳ್ಳು ಬೆಲ್ಲದ ಜೊತೆಗೆ ಸಿಹಿ ಭೋಜನದೊಂದಿಗೆ ಸಂಕ್ರಾಂತಿ ಸಂಭ್ರಮದಲ್ಲಿ ಭಾಗಿಯಾಗೋಣ, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಕಾರ್ಯಕ್ರಮದ ಮೆರುಗು ಹೆಚ್ಚಿಸಬೇಕೆಂದು ಕೆಪಿಸಿಸಿ ಮಹಿಳಾ ಪ್ರಧಾನ ಕಾರ್ಯದರ್ಶಿ ಎಂ.ಪಿ ಲತಾ ಮಲ್ಲಿಕಾರ್ಜುನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.