ಪ್ರವಾಹಕ್ಕೆ ತತ್ತಿರಿಸಿರುವ ಗ್ರಾಮಗಳಿಗೆ ಶಾಸಕ ಭೇಟಿ

ಪ್ರವಾಹಕ್ಕೆ ತತ್ತಿರಿಸಿರುವ ಗ್ರಾಮಗಳಿಗೆ ಶಾಸಕ ಭೇಟಿ

ಜೇವರ್ಗಿ : ಭೀಕರ ಪ್ರವಾಹದಿಂದ ತತ್ತರಿಸಿರುವ, ತಾಲೂಕಿನ ಮಲ್ಲಾ (ಬಿ ), ಮಲ್ಲಾ (ಕೆ ) ,ಹೊನ್ನಾಳ ,ಹೊತ್ತಿನಮೂಡ್ , ಬಿರಾಳ್ ,ರಾಮ್ ಪುರ್ ಗ್ರಾಮಗಳಿಗೆ ಶಾಸಕರು ಹಾಗೂ ವಿಧಾನ ಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಡಾ.ಅಜಯ್ ಸಿಂಗ್ ಅವರು ಭೇಟಿ ನೀಡಿ ವೀಕ್ಷಣೆ ನಡೆಸಿ ಗ್ರಾಮಸ್ಥರ ಜೊತೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರರಾದ ಸಿದ್ದರಾಯ್ ಭೋಸಗಿ, ರಾಜಶೇಖರ ಸಿರಿ, ಗೌಡಪ್ಪಗೌಡ ಪೋಲೀಸ್ ಪಾಟೀಲ, ಗುರುಲಿಂಗಪ್ಪಗೌಡ ಆಂದೋಲ, ಸಂತೋಷ ಬಿರಾಳ, ಮರೆಪ್ಪ ಸರಡಗಿ ಸೇರಿದಂತೆ ಅನೇಕರು ಗ್ರಾಮಸ್ಥರು ಇದ್ದರು.

Related