ವಿವಿಧ ಕಾಮಗಾರಿಗಳಿಗೆ ರಾಜಾ ರಾಮಚಂದ್ರ ನಾಯಕ ಚಾಲನೆ

ವಿವಿಧ ಕಾಮಗಾರಿಗಳಿಗೆ ರಾಜಾ ರಾಮಚಂದ್ರ ನಾಯಕ ಚಾಲನೆ

ಸಿರವಾರ, ಮಾ. 06: ಕಾಮಗಾರಿಗಳು ಗುಣಮಟ್ಟದಿಂದ ಕೂಡಿದ್ದು ಹಾಗೂ ನಿಗದಿತ ಸಮಯಕ್ಕೆ ಕೆಲಸ ಪೂರ್ಣಗೊಳಿಸಬೇಕು ಎಂದು ಜೆಡಿಎಸ್ ಪಕ್ಷದ ಯುವ ಮುಂಖಡ ಹಾಗೂ ಶಾಸಕರ ಸಹೋದರರಾದ ರಾಜಾ ರಾಮಚಂದ್ರ ನಾಯಕ ಗುತ್ತಿಗೆದಾರರಿಗೆ ತಿಳಿಸಿದರು.

ತಾಲ್ಲೂಕಿನ ಗಣದಿನ್ನಿ ಹಾಗೂ ಜಕ್ಕಲದಿನ್ನಿ ಗ್ರಾಮದಲ್ಲಿ ಕಾಡಾ ಯೋಜನೆ ಅಡಿಯಲ್ಲಿ ಸುಮಾರು 27  ಲಕ್ಷ ರೂಪಾಯಿಗಳ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮಸ್ಥರ ಸಹಕಾರದೊಂದಿಗೆ ಗುಣಮಟ್ಟದ ಕಾಮಗಾರಿ ನಿರ್ವಹಿಸುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ನಾಗರಾಜ ಬೋಗಾವತಿ, ಜೆಡಿಎಸ್ ಘಟಕದ ನಾಗರಾಜ ಗೌಡ, ದಾನಪ್ಪ ಸಿರವಾರ, ದೇವೇಂದ್ರ, ಹನುಮೇಶ ನಾಯಕ ನೀರಮಾನ್ವಿ, ಶಿವು, ಶರಣಪ್ಪ ನಂದಿಹಾಳ‌, ಯುವ ಮುಖಂಡರಾದ ಸೂಗುರಯ್ಯ ಹಿರೇಮಠ, ಡ್ರೈವರ್ ರಂಗಣ್ಣ ನಾಯಕ, ನರಸಪ್ಪ, ಅರ್ಜುನ ನಾಯಕ, ಹನುಮೇಶ ನಾಯಕ, ನಾರಾಯಣ, ಮುದುಕಪ್ಪ ನಾಯಕ, ಅಮರಪ್ಪಗೌಡ, ರೆಡ್ಡೆಪ್ಪ, ಅಮರೇಶ ನಾಯಕ, ಮಲ್ಲಪ್ಪ ಗೌಡ ಶಾಖಾಪೂರು, ಬಸವರಾಜ ವಡಗೇರಿ‌, ಹನುಮಂತ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Related