ಬೆಳ್ಳಂಬೆಳಗ್ಗೆ ಬೇಕರಿ ಭಸ್ಮ

ಬೆಳ್ಳಂಬೆಳಗ್ಗೆ ಬೇಕರಿ ಭಸ್ಮ

ಲಕ್ಷ್ಮೇಶ್ವರ: ಲಕ್ಷ್ಮೇಶ್ವರದಲ್ಲಿ ಬೆಳ್ಳಂಬೆಳಗ್ಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಲಕ್ಮೀ ಬೇಕರಿಯು ಸಂಪೂರ್ಣವಾಗಿ ಸುಟ್ಟು ಹೋಗಿದೆ.

ಬೇಕರಿಯಲ್ಲಿನ ಲಕ್ಷಾಂತರ ಮೌಲ್ಯದ ತಿಂಡಿ ತಿನಿಸುಗಳು ಅನಾಹುತದಲ್ಲಿ ಸುಟ್ಟು ಭಸ್ಮವಾಗಿದೆ. 70 ರಿಂದ 80 ಸಾವಿರ ರೂಗಳು ಹಾಗೂ ಸಕ್ಕರೆ ಚೀಲಗಳು, ಮೈದಾ ಹಿಟ್ಟಿನ ಚೀಲಗಳು ಘಟನೆಯಲ್ಲಿ ಸುಟ್ಟು ಕರಕಲಾಗಿವೆ.

ಅಲ್ಲದೆ ಬ್ಯಾಂಕ್ ಚೆಕ್‍ಗಳು, ಮಹತ್ವದ ದಾಖಲೆ ಪತ್ರಗಳು ನಾಶವಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದರು.

Related