ಲಕ್ಷ್ಮಣ ಸವದಿ ಡಿಸಿಎಂಯಾಗಿದ್ದಕ್ಕೆ ಸಂಭ್ರಮಿಸಿದ ಗಾಣಿಗ ಸಮಾಜ

ಲಕ್ಷ್ಮಣ ಸವದಿ ಡಿಸಿಎಂಯಾಗಿದ್ದಕ್ಕೆ ಸಂಭ್ರಮಿಸಿದ ಗಾಣಿಗ ಸಮಾಜ

ಮುದ್ದೇಬಿಹಾಳ : ಶ್ರಮಜೀವಿಗಳು ಎಂದೇ ಖ್ಯಾತಿ ಪಡೆದಿರುವ ಗಾಣಿಗ ಸಮಾಜಕ್ಕೆ ಮುಖಮಂತ್ರಿ ಯಡಿಯೂರಪ್ಪನವರು ಸಂಪುಟದಲ್ಲಿ ಗಾಣಿಗ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯವನ್ನು ನೀಡಿ ಲಕ್ಷ್ಮಣ ಸವದಿ ಅವರಿಗೆ ಉಪ ಮುಖ್ಯಮಂತ್ರಿಗಳನ್ನಾಗಿ ಮಾಡಿದ್ದು ಹರ್ಷವಾಗಿದೆ ಎಂದು ತಾಳಿಕೋಟಿ ಗಾಣಿಗ ಸಮಾಜದ ತಾಲೂಕಾಧ್ಯಕ್ಷ ಎಸ್.ಎಂ.ಸಜ್ಜನ ಹೇಳಿದ್ದಾರೆ.

ಮುದ್ದೇಬಿಹಾಳ ಪಟ್ಟಣಕ್ಕೆ ಆಗಮಿಸಿ ಎಸ್.ಎಫ್.ಸಿ. ಯೋಜನೆಯಡಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆಗೆ ಆಗಮಿಸಿದ್ದ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಸಮಾಜದವತಿಯಿಂದ ಹಮ್ಮಿಕೊಳ್ಳಲಾದ ಸನ್ಮಾನ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಈಗಾಗಲೇ ತಾಳಿಕೋಟಿ ತಾಲ್ಲೂಕಿನ ಸಾರಿಗೆ ನೌಕರರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಿರುವ ಸವದಿ ಅವರು ಮುದ್ದೇಬಿಹಾಳ ತಾಲ್ಲೂಕಿನಲ್ಲಿಯೇ ನೂತನ ಆರ್.ಟಿ.ಓ. ಕಛೇರಿ ಪ್ರಾರಂಭಿಸಲಾಗುವ ಬಗ್ಗೆ ತಿಳಿಸಿದ್ದು ಸ್ವಾಗತಾರ್ಹವಾಗಿದೆ. ಇದರಿಂದ ಕೇವಲ ಮುದ್ದೇಬಿಹಾಳ ಮಾತ್ರವಲ್ಲದೇ ತಾಳಿಕೋಟಿ, ಬ.ಬಾಗೇವಾಡಿ ಸೇರಿದಂತೆ ಸುತ್ತಮುತ್ತಲಿನ ತಾಲ್ಲೂಕಿನ ಬಡ ರೈತರಿಗೂ ಹೆಚ್ಚು ಅನುಕೂಲಕರವಾಗುತ್ತದೆ, ಎಂದು ಕೇವಲ ಜನಸಾಮಾನ್ಯರ ಕ್ಷೇಯಾಭಿವೃದ್ಧಿಗಾಗಿ ದುಡಿದ ಸವದಿ ಅವರಿಗೆ ಸೂಕ್ತ ಸ್ಥಾನವನ್ನು ನೀಡಿದ್ದು ಹೃದಯಪೂರ್ವಕ ಅಭಿನಂದನೆಗಳು ಎಂದು ಹೇಳಿದರು.

 

Related