ಶಾಸಕರು ಬದಲಾದರೆ ಗ್ರಾಮಾಭಿವೃದ್ಧಿಯಾಗುತ್ತೆ

  • In State
  • August 25, 2021
  • 323 Views
ಶಾಸಕರು ಬದಲಾದರೆ ಗ್ರಾಮಾಭಿವೃದ್ಧಿಯಾಗುತ್ತೆ

ಯಡ್ರಾಮಿ : ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳು ಪ್ರಗತಿಯಾಗುತ್ತವೆ. ರಸ್ತೆಗಳು ಅಭಿವೃದ್ಧಿಯಾಗುತ್ತದೆ ಎಂದು ಹಗಲುಗನಸು ಕಂಡಿದ್ದು, ಈಗ ಆದನ್ನು ಬದಲಿಸಬೇಕಾಗಿದೆ. ಶಾಸಕರು ಬದಲಾಗಬೇಕು, ಆಗ ಮಾತ್ರ ಗ್ರಾಮಗಳು ಬದಲಾಗುತ್ತದೆ ಎಂದು ಜನರು ಬುಧವಾರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಚಿಗರಳ್ಳಿಯಿಂದ ಯಡ್ರಾಮಿ ತಾಲೂಕು ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಅವಧಿಯಲ್ಲಿದ್ದ ರೀತಿಯಲ್ಲೇ ಇದ್ದು, ಅವರ ಮಗ ಶಾಸಕ ಡಾ.ಅಜಯಸಿಂಗ್ ಅವರ ಎರಡನೇ ಅವಧಿಯಲ್ಲಿ ಸಹ ಬದಲಾವಣೆ ಕಂಡಿಲ್ಲ. ಇವರ ಮನೆತನದವರು ಮಾಡಿರುವ ಅಭಿವೃದ್ಧಿ ಎಂತಹದ್ದು ಎಂದು ಸಾರಿ ಹೇಳುತ್ತವೆ. ಈ ರಸ್ತೆಯಲ್ಲಿ ಬಸ್ ಲಾರಿಯಂತಹ ದೊಡ್ಡ ವಾಹನಗಳು ಎದುರು ಬಂದರೆ ಆಟೋ, ಬೈಕ್, ಕಾರಿನಂತಹ ಸಣ್ಣ ವಾಹನಗಳು ಸಂಚರಿಸಲು ತುಂಬಾ ತೊಂದರೆ ಉಂಟಾಗುತ್ತಿದೆ. ಇದರಿಂದ ಎಷ್ಟೋ ಅನಾಹುತಗಳು ಸಂಭವಿಸಿವೆ. ಇದರ ಬಗ್ಗೆ ಯಾಕೆ ಗಮನ ಹರಿಸುತ್ತಿಲ್ಲ ಎಂದು ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದರು.

Related